ಭಟ್ಕಳ:
ಮಹಿಳೆಯರ ಉದರದಲ್ಲಿದ್ದ ಗಡ್ಡೆಯನ್ನು ಇಲ್ಲಿನ ತಾಲೂಕಾ ಸರಕಾರಿ ಆಸ್ಪತ್ರೆಯ ಸರ್ಜನ್ ಡಾ. ಮಂಜುನಾಥ ಶೆಟ್ಟಿ ಯಶಸ್ವೀ ಶಸ್ತ್ರ ಚಿಕಿತ್ಸೆಯ ಮೂಲಕ ಹೊರ ತೆಗೆದಿದ್ದು ಮಹಿಳೆಯರು ಆರೋಗ್ಯವಾಗಿದ್ದಾರೆ.
ಗ್ರಾಮೀಣ ಭಾಗದ ಮಹಿಳೆಯರ ಸಂಕಷ್ಟಕ್ಕೆ ಸದಾ ಸ್ಪಂಧಿಸುವ ವೈದ್ಯರಾದ ಮಂಜುನಾಥ ಶೆಟ್ಟಿ ಮೂವರು ಮಹಿಳೆಯರ ಉದರದಲ್ಲಿ ಗಡ್ಡೆಯಿರುವುದನ್ನು ಪತ್ತೆ ಹಚ್ಚಿ ಯಶಸ್ವೀ ಶಸ್ತ್ರ ಚಿಕಿತ್ಸೆಯ ಮೂಲಕ ಹೊರ ತೆಗೆದಿದ್ದಾರೆ.
ಫೇಸ್: ತಾಲೂಕಿನ ಶಿರಾಲಿಯ ತಟ್ಟಿಹಕ್ಕಲು, ಸರ್ಪನಕಟ್ಟೆ ಹಾಗೂ ದೂರದ ಮಂಡ್ಯ ಜಿಲ್ಲೆಯ ಓರ್ವ ಮಹಿಳೆ ಸೇರಿದಂತೆ ಮೂವರು ಮಹಿಳೆಯರು ಇಲ್ಲಿನ ಸರಕಾರ ಆಸ್ಪತ್ರೆಗೆ ತಪಾಸಣೆಗಾಗಿ ಬಂದಿದ್ದರು. ಮೂವರಿಗೂ ಕೂಡಾ ಒಂದೇ ತೆರನಾದ ಕಾಯಿಲೆಯಿರುವುದನ್ನು ಗಮನಿಸಿದ ವೈದ್ಯರು ಸ್ಕಾನಿಂಗ್ ಮಾಡಿದಾಗ ಗಡ್ಡೆಯಿರುವುದು ಪತ್ತೆಯಾಗಿತ್ತು. ಕ್ರಮವಾಗಿ 9 ಕೆ.ಜಿ., 8 ಕೆ.ಜಿ. ಹಾಗೂ 4 ಕೆ.ಜಿ. ಭಾರವುಳ್ಳ ಮೂರೂ ಗಡ್ಡೆಗಳನ್ನು ಮಹಿಳೆಯರ ಉದರದಿಂದ ಹೊರ ತೆಗೆದಿದ್ದು ಮಹಿಳೆಯರು ಆರೋಗ್ಯವಾಗಿದ್ದಾರೆ.
Leave a Comment