ಕಾರವಾರ:
ರಕ್ಷಣಾ ಸಚಿವಾಲಯದ ನೌಕಾಪಡೆ, ಸಶಸ್ತ್ರ ಪಡೆಗಳು ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಒಟ್ಟಾಗಿ ಮಾನವಿಯ ನೆರವು ಮತ್ತು ವಿಪತ್ತು ನಿರ್ವಹಣೆ ಸಂಸ್ಥೆಗಳ ಸಹಯೋಗದೊಂದಿಗೆ ಕಾರವಾರದಲ್ಲಿ ಮೇ 20 ರವರೆಗೆ ಸುನಾಮಿ ಅಣಕು ಕಾರ್ಯಾಚರಣೆ ನಡೆಸುತ್ತಿವೆ.
ಎಲ್ಲಾ ರೀತಿಯ ಪ್ರಕೃತಿ ವಿಕೋಪಗಳ ನರ್ವಹಣೆ ಯೋಜನೆಗಳನ್ನು ಮೌಲಿಕರಿಸುವ ಉದ್ದೇಶದಿಂದ ಸುನಾಮಿ ಅಣಕು ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಾಯಾಚರಣೆಯನ್ನು ಎರಡು ವಿಭಾಗಗಳಲ್ಲಿ ಆಯೋಜಿಸಲಾಗಿದೆ. ಸುನಾಮಿ ಕರಾವಳಿಯನ್ನು ಅಪ್ಪಳಿಸುವದಕ್ಕೆ ಮುಂಚೆ ತೆಗೆದುಕೊಳ್ಳಬೇಕಾದ ಕ್ರಮಗಳ ಸನ್ನಿವೇಶ ಮತ್ತು ಸುನಾಮಿ ಕರಾವಳಿ ತೀರವನ್ನು ದ್ವಂಸಗೋಳಿಸಿ ನಾಶಪಡಿಸಿದ ನಂತರ ತೇಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಪ್ರಾತ್ಯಕ್ಷಿತೆಯಲ್ಲಿ ಪ್ರದರ್ಶಿಸಲಾಗುವದು ಎಂದು ಐ.ಎನ್.ಎಸ್.ಕದಂ¨ ನೌಕಾ ನೆಲೆ ಅಧಿಕಾರಿಗಳು ತಿಳಿಸಿದ್ದಾರೆ.
Leave a Comment