• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಗುತ್ತಿಗೆ ಪೌರಕಾರ್ಮಿಕರ ಸಮಸ್ಯೆ ಬಗೆಹರಿಸುವಂತೆ ಡಿಸಿಗೆ ಮನವಿ

May 20, 2017 by Sachin Hegde Leave a Comment

ದಾಂಡೇಲಿ :

ದಲಿತ ಕಾರ್ಮಿಕರಿಗೆ ವೇತನ ನೀಡುವಲಿ ಗುತ್ತಿಗೆದಾರರೊಂದಿಗೆ ನಗರಸಭೆಯ ಅಧಿಕಾರಿಗಳು ಶಾಮಿಲಾಗಿ ವಂಚಿಸಿ ಅವ್ಯವಹಾರ ನಡೆಸುತ್ತಿದ್ದಾರೆ. ತಕ್ಷಣ ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕ ಸಂಘಟನೆಯ ಅಧ್ಯಕ್ಷ ಡಿ.ಸ್ಯಾಮಸನ್ ಜಿಲ್ಲಾಧಿಕಾರಿಗಳಿಗೆ ಲಿಖಿತ ಮನವಿ ಮಾಡಿದ್ದಾರೆ.

ನಗರಸಭೆಯಲ್ಲಿ ದುಡಿಯುವ ಎಲ್ಲ ವಿಭಾಗದ ಕಾರ್ಮಿಕರ ಕನಿಷ್ಟ ವೇತನ, ಸಿಗಬೇಕಾದ ವಿವಿಧ ಸೌಲತ್ತುಗಳ ಜಾರಿ, ಸಮರ್ಪಕರ ಕಾರ್ಮಿಕ ಕಾನೂನುಗಳ ಜಾರಿ ಮುಂತಾದ ಬೇಕಡಿಕೆಗಳಿಗೊಸ್ಕರ ಹೋರಾಟ, ಚಳುವಳಿಗಳನ್ನು ಮಾಡುತ್ತ ಮನವಿಗಳನ್ನು ಸಲ್ಲಿಸುತ್ತ ಬಂದಿದ್ದೇವೆ. ಆದರೆ ಒಂದು ಸಮಸ್ಯೆ ಇತ್ಯರ್ಥವಾಗುವಷ್ಟರಲ್ಲಿ ಮತ್ತೊಂದು ಸಮಸ್ಯೆ ಉದ್ಭವ ಅನ್ನುವ ರೀತಿಯಲ್ಲಿ ನಗರಾಡಳಿತ ಕಾರ್ಮಿಕರ ಸಮಸ್ಯೆಗಳನ್ನು ಇತ್ಯರ್ಥ ಮಾಡದೆ ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ.

2011ರಿಂದ ವೇತನ, ಪಿಎಫ್ ಇಎಸ್‍ಐ ವಂಚನೆ ಕುರಿತಂತೆ ಹೋರಾಟ ಮಾಡಿ ಒತ್ತಾಯಿಸಿದಾಗ ಕಾರ್ಮಿಕರಿಗೆ ನೀಡುವ ವೇತನ ಸೌಲತ್ತುಗಳಲ್ಲಿ ವಂಚಿಸಿರುವ ಬಗ್ಗೆ ನಗರಾಡಳಿತ ನಡೆಸಿರುವ ಲೆಕ್ಕ ಪತ್ರಗಳಲ್ಲಿ ವ್ಯತ್ಯಾಸ ಕಂಡಿದೆ. ಇದರ ಕುರಿತಂತೆ ಜಿಲ್ಲಾಡಳಿತವು ಕೂಡ ಗುತ್ತಿಗೆದಾರರ ವಿರುದ್ದ ಎಫ್‍ಐಆರ್, ಗುತ್ತಿಗೆದಾರರ ಆಸ್ತಿ ಮುಟ್ಟುಗೋಲು ಮಾಡುವಂತೆ ಆದೇಶಿಸಿದ್ದು ಇದರ ಪ್ರಕ್ರಿಯೆ ನಡೆದಿಲ್ಲ. ಹಿಂದೆ ಮಾಡಿದ ಹೋರಾಟದ ಸಂದರ್ಭದಲ್ಲಿ ಅಂದಿನ ಗುತ್ತಿಗೆದಾರರು ಎಲ್ಲ ವ್ಯತ್ಯಾಸ, ಸೌಲತ್ತುಗಳನ್ನು ನೀಡುತ್ತೇವೆ ಎಂದು ಆರಕ್ಷಕರ ಸಮಕ್ಷಮದಲ್ಲಿ ಮುಚ್ಚಳಿಕೆ ಬರೆದು ಕೊಟ್ಟಿದ್ದರು. ಇದರ ಜೊತೆಗೆ ಹೋರಾಟ ಸ್ಥಳಕ್ಕೆ ನಗರಾಡಳಿತದ ಆಯುಕ್ತರು ಮತ್ತು ಅಧಿಕಾರಿಗಳು ಪೊಲೀಸ ಅಧಿಕಾರಿಗಳ ಸಮಕ್ಷಮದಲ್ಲಿ ನಮ್ಮ ಸಂಘಟನೆಯ ಮುಖಂಡರುಗಳಿಗೆ ಲಿಖಿತವಾಗಿ ಬೇಡಿಕೆಗಳನ್ನು ಹಂತಹಂತವಾಗಿ ಬಗೆಹರಿಸುತ್ತೇವೆ ಎಂದು ಆಶ್ವಾಸನೆ ನೀಡಿದ್ದರು. ಭರವಸೆ ನೀಡಿ ಒಂಬತ್ತು ತಿಂಗಳು ಕಳೆದರು ಕೂಲಿಕಾರ್ಮಿಕರ ಸಮಸ್ಯೆಯನ್ನು ಬಗೆ ಹರಿಸದೆ ಕರ್ತವ್ಯಲೋಪವೆಸಗಿದ್ದಾರೆ ಎಂದು ಸ್ಯಾಮಸನ್ ಆರೋಪಿಸಿದ್ದಾರೆ.

ಇನ್ನು ಹಳೆ ಗುತ್ತಿಗೆ ಅವಧಿ ಮುಗಿದ ನಂತರ ಜನವರಿ 2017ರಿಂದ ಸ್ವಚ್ಚತಾ ವಿಭಾಗ ಮತ್ತು ಮನೆಮನೆ ಕಸ ಸಂಗ್ರಹ ವಿರ್ವಹಣೆಯ ಗುತ್ತಿಗೆಯನ್ನು ಹುಬ್ಬಳ್ಳಿಯ ಶ್ರೀಧರ ಎಂಬ ಗುತ್ತಿಗೆದಾರರು ಪಡೆದುಕೊಂಡಿದ್ದು, ಇವರು ಗುತ್ತಿಗೆ ನಿರ್ವಹಿಸುವಲ್ಲಿ ಹಲವು ಲೋಪಗಳನ್ನು ಮಾಡುತ್ತಿರುವ ಬಗ್ಗೆ ದೂರು ನೀಡಿದ್ದರೂ ನಗರಸಭೆಯ ಪರಿಸರ ಅಧಿಕಾರಿಗಳಾಗಿರುವ ಮಲ್ಲಿಕಾರ್ಜುನ ಮತ್ತು ಸುನೀಲ ಹಾಗೂ ಪಟ್ಟಭದ್ರ ಹಿತಾಶಕ್ತಿಗಳು ಶಾಮಿಲಾಗಿ ಗುತ್ತಿಗೆದಾರರೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಬಯೋಮೆಟ್ರಿಕ್ ಹಾಜಾರಾತಿ ವ್ಯವಸ್ಥೆ ಇದ್ದರೂ ಎಲ್ಲ ಕಾರ್ಮಿಕರ ಹಾಜರಾತಿ ತೆಗೆದುಕೊಳ್ಳದೇ ಕೇವಲ 20 ಹಳೆ ಕಾರ್ಮಿಕರ ಹಾಜರಾತಿ ತೆಗೆದು ಉಳಿದ ಕಾರ್ಮಿಕರ ಹಾಜರಾತಿ ಪುಸ್ತಕದಲ್ಲಿ ಹಾಜರಾತಿಗಳನ್ನು ಖೋಟ್ಟಿ ನಮೂದಿಸಿ ಎಷ್ಟು ಕಾರ್ಮಿಕರು ಎಲ್ಲೇಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದಕ್ಕೆ ನಗರಸಭೆಯಿಂದ ನಿಗಾ ವಹಿಸದೆ ಗುತ್ತಿಗೆದಾರರೇ ನೀಡುವ ಹಾಜರಾತಿ ಅಂತಿಮಗೊಳಿಸಿ ಲಕ್ಷಾಂತರ ರೂಗಳ ಬಿಲ್ಲುಗಳನ್ನು ಕಳೆದ ನಾಲ್ಕೈದು ತಿಂಗಳುಗಳಿಂದ ಗುತ್ತಿಗೆದಾರರಿಗೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, National News Tagged With: ಅವ್ಯವಹಾರ, ಆರಕ್ಷಕರ, ಎಫ್‍ಐಆರ್, ಕಾರ್ಮಿಕರಿಗೆ, ಗುತ್ತಿಗೆ, ಗುತ್ತಿಗೆದಾರ, ಚಳುವಳಿ, ಡಿಸಿಗೆ, ದಲಿತ, ದಾಂಡೇಲಿ, ಪೌರಕಾರ್ಮಿಕರ, ಬಗೆ, ಮನವಿ, ಮುನ್ಸಿಪಲ್, ವಂಚಿಸಿ, ಸಮಕ್ಷಮ, ಸಮಸ್ಯೆ, ಹರಿಸುವಂತೆ, ಹುಬ್ಬಳ್ಳಿ, ಹೋರಾಟ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar