ದಾಂಡೇಲಿ :
ದಲಿತ ಕಾರ್ಮಿಕರಿಗೆ ವೇತನ ನೀಡುವಲಿ ಗುತ್ತಿಗೆದಾರರೊಂದಿಗೆ ನಗರಸಭೆಯ ಅಧಿಕಾರಿಗಳು ಶಾಮಿಲಾಗಿ ವಂಚಿಸಿ ಅವ್ಯವಹಾರ ನಡೆಸುತ್ತಿದ್ದಾರೆ. ತಕ್ಷಣ ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕ ಸಂಘಟನೆಯ ಅಧ್ಯಕ್ಷ ಡಿ.ಸ್ಯಾಮಸನ್ ಜಿಲ್ಲಾಧಿಕಾರಿಗಳಿಗೆ ಲಿಖಿತ ಮನವಿ ಮಾಡಿದ್ದಾರೆ.
ನಗರಸಭೆಯಲ್ಲಿ ದುಡಿಯುವ ಎಲ್ಲ ವಿಭಾಗದ ಕಾರ್ಮಿಕರ ಕನಿಷ್ಟ ವೇತನ, ಸಿಗಬೇಕಾದ ವಿವಿಧ ಸೌಲತ್ತುಗಳ ಜಾರಿ, ಸಮರ್ಪಕರ ಕಾರ್ಮಿಕ ಕಾನೂನುಗಳ ಜಾರಿ ಮುಂತಾದ ಬೇಕಡಿಕೆಗಳಿಗೊಸ್ಕರ ಹೋರಾಟ, ಚಳುವಳಿಗಳನ್ನು ಮಾಡುತ್ತ ಮನವಿಗಳನ್ನು ಸಲ್ಲಿಸುತ್ತ ಬಂದಿದ್ದೇವೆ. ಆದರೆ ಒಂದು ಸಮಸ್ಯೆ ಇತ್ಯರ್ಥವಾಗುವಷ್ಟರಲ್ಲಿ ಮತ್ತೊಂದು ಸಮಸ್ಯೆ ಉದ್ಭವ ಅನ್ನುವ ರೀತಿಯಲ್ಲಿ ನಗರಾಡಳಿತ ಕಾರ್ಮಿಕರ ಸಮಸ್ಯೆಗಳನ್ನು ಇತ್ಯರ್ಥ ಮಾಡದೆ ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ.
2011ರಿಂದ ವೇತನ, ಪಿಎಫ್ ಇಎಸ್ಐ ವಂಚನೆ ಕುರಿತಂತೆ ಹೋರಾಟ ಮಾಡಿ ಒತ್ತಾಯಿಸಿದಾಗ ಕಾರ್ಮಿಕರಿಗೆ ನೀಡುವ ವೇತನ ಸೌಲತ್ತುಗಳಲ್ಲಿ ವಂಚಿಸಿರುವ ಬಗ್ಗೆ ನಗರಾಡಳಿತ ನಡೆಸಿರುವ ಲೆಕ್ಕ ಪತ್ರಗಳಲ್ಲಿ ವ್ಯತ್ಯಾಸ ಕಂಡಿದೆ. ಇದರ ಕುರಿತಂತೆ ಜಿಲ್ಲಾಡಳಿತವು ಕೂಡ ಗುತ್ತಿಗೆದಾರರ ವಿರುದ್ದ ಎಫ್ಐಆರ್, ಗುತ್ತಿಗೆದಾರರ ಆಸ್ತಿ ಮುಟ್ಟುಗೋಲು ಮಾಡುವಂತೆ ಆದೇಶಿಸಿದ್ದು ಇದರ ಪ್ರಕ್ರಿಯೆ ನಡೆದಿಲ್ಲ. ಹಿಂದೆ ಮಾಡಿದ ಹೋರಾಟದ ಸಂದರ್ಭದಲ್ಲಿ ಅಂದಿನ ಗುತ್ತಿಗೆದಾರರು ಎಲ್ಲ ವ್ಯತ್ಯಾಸ, ಸೌಲತ್ತುಗಳನ್ನು ನೀಡುತ್ತೇವೆ ಎಂದು ಆರಕ್ಷಕರ ಸಮಕ್ಷಮದಲ್ಲಿ ಮುಚ್ಚಳಿಕೆ ಬರೆದು ಕೊಟ್ಟಿದ್ದರು. ಇದರ ಜೊತೆಗೆ ಹೋರಾಟ ಸ್ಥಳಕ್ಕೆ ನಗರಾಡಳಿತದ ಆಯುಕ್ತರು ಮತ್ತು ಅಧಿಕಾರಿಗಳು ಪೊಲೀಸ ಅಧಿಕಾರಿಗಳ ಸಮಕ್ಷಮದಲ್ಲಿ ನಮ್ಮ ಸಂಘಟನೆಯ ಮುಖಂಡರುಗಳಿಗೆ ಲಿಖಿತವಾಗಿ ಬೇಡಿಕೆಗಳನ್ನು ಹಂತಹಂತವಾಗಿ ಬಗೆಹರಿಸುತ್ತೇವೆ ಎಂದು ಆಶ್ವಾಸನೆ ನೀಡಿದ್ದರು. ಭರವಸೆ ನೀಡಿ ಒಂಬತ್ತು ತಿಂಗಳು ಕಳೆದರು ಕೂಲಿಕಾರ್ಮಿಕರ ಸಮಸ್ಯೆಯನ್ನು ಬಗೆ ಹರಿಸದೆ ಕರ್ತವ್ಯಲೋಪವೆಸಗಿದ್ದಾರೆ ಎಂದು ಸ್ಯಾಮಸನ್ ಆರೋಪಿಸಿದ್ದಾರೆ.
ಇನ್ನು ಹಳೆ ಗುತ್ತಿಗೆ ಅವಧಿ ಮುಗಿದ ನಂತರ ಜನವರಿ 2017ರಿಂದ ಸ್ವಚ್ಚತಾ ವಿಭಾಗ ಮತ್ತು ಮನೆಮನೆ ಕಸ ಸಂಗ್ರಹ ವಿರ್ವಹಣೆಯ ಗುತ್ತಿಗೆಯನ್ನು ಹುಬ್ಬಳ್ಳಿಯ ಶ್ರೀಧರ ಎಂಬ ಗುತ್ತಿಗೆದಾರರು ಪಡೆದುಕೊಂಡಿದ್ದು, ಇವರು ಗುತ್ತಿಗೆ ನಿರ್ವಹಿಸುವಲ್ಲಿ ಹಲವು ಲೋಪಗಳನ್ನು ಮಾಡುತ್ತಿರುವ ಬಗ್ಗೆ ದೂರು ನೀಡಿದ್ದರೂ ನಗರಸಭೆಯ ಪರಿಸರ ಅಧಿಕಾರಿಗಳಾಗಿರುವ ಮಲ್ಲಿಕಾರ್ಜುನ ಮತ್ತು ಸುನೀಲ ಹಾಗೂ ಪಟ್ಟಭದ್ರ ಹಿತಾಶಕ್ತಿಗಳು ಶಾಮಿಲಾಗಿ ಗುತ್ತಿಗೆದಾರರೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಬಯೋಮೆಟ್ರಿಕ್ ಹಾಜಾರಾತಿ ವ್ಯವಸ್ಥೆ ಇದ್ದರೂ ಎಲ್ಲ ಕಾರ್ಮಿಕರ ಹಾಜರಾತಿ ತೆಗೆದುಕೊಳ್ಳದೇ ಕೇವಲ 20 ಹಳೆ ಕಾರ್ಮಿಕರ ಹಾಜರಾತಿ ತೆಗೆದು ಉಳಿದ ಕಾರ್ಮಿಕರ ಹಾಜರಾತಿ ಪುಸ್ತಕದಲ್ಲಿ ಹಾಜರಾತಿಗಳನ್ನು ಖೋಟ್ಟಿ ನಮೂದಿಸಿ ಎಷ್ಟು ಕಾರ್ಮಿಕರು ಎಲ್ಲೇಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದಕ್ಕೆ ನಗರಸಭೆಯಿಂದ ನಿಗಾ ವಹಿಸದೆ ಗುತ್ತಿಗೆದಾರರೇ ನೀಡುವ ಹಾಜರಾತಿ ಅಂತಿಮಗೊಳಿಸಿ ಲಕ್ಷಾಂತರ ರೂಗಳ ಬಿಲ್ಲುಗಳನ್ನು ಕಳೆದ ನಾಲ್ಕೈದು ತಿಂಗಳುಗಳಿಂದ ಗುತ್ತಿಗೆದಾರರಿಗೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
Leave a Comment