ಕಾರವಾರ:
ಅಗತ್ಯಕ್ಕಿಂತ ಹೆಚ್ಚಿನ ಮರಳು ದಾಸ್ತಾನು ಮಾಡಿದಲ್ಲಿ ಅದನ್ನು ಮುಟ್ಟುಗೋಲು ಹಾಕಿಕೊಳ್ಳುವದಾಗಿ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಆದರೆ, ಜಿಲ್ಲಾಧಿಕಾರಿ ಕಚೇರಿ ಪಕ್ಕದಲ್ಲಿನ ಕರೂರು ಮೈದಾನದಲ್ಲಿಯೇ ಸರ್ಕಾರಿ ಕೆಲಸಕ್ಕೆ ಎಂದು ಲೋಡ್ ಗಟ್ಟಲೆ ಮರಳನ್ನು ಶೇಖರಣೆ ಮಾಡಲಾಗುತ್ತಿದೆ.
ಮರಳಿನ ಕೊರತೆ, ಹೆಚ್ಚಿದ ದರದ ನಡುವೆ ಜಿಲ್ಲಾಡಳಿ ಸರಕಾರದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವ ದೃಷ್ಟಿಯಿಂದ ಜಿಲ್ಲಾಡಳಿತದ ಪಕ್ಕದ ಕರೂರ್ ಮೈದಾನದಲ್ಲಿ ಮರಳನ್ನು ಲೋಡ್ಗಟ್ಟಲೆ ಶೇಖರಣೆ ಮಾಡಿಕೊಳ್ಳುತ್ತಿದೆ ಎಂಬ ಮಾಹಿತಿ ದೊರೆಯುತ್ತದೆ. ಕಾಳಿ ನದಿಯಲ್ಲಿ ಮರಳುಗಾರಿಕೆ ನಡೆಸುವ ಪರವಾನಗಿ ಪಡೆದ ಸುಮಾರು 38 ಲೀಜ್ದಾರರು ಸರಕಾರದ ದರದಂತೆ ತಲಾ ಒಬ್ಬರುವ ಐದು ಲೋಡ್ಗಳನ್ನು ಕರೂರ್ ಮೈದಾನದಲ್ಲಿ ಮರಳು ಡಂಪ್ ಮಾಡಬೇಕು ಎಂದು ಜಿಲ್ಲಾಡಳಿತದ ಅಧಿಕಾರಿಗಳು ಹೇಳಿರುವ ಬಗ್ಗೆ ಲೀಜ್ದಾರರು ಹೇಳುತ್ತಾರೆ.
ಕಳೆದ ಒಂದು ವರ್ಷದಿಂದ ಮರಳುಗಾರಿಕೆ ನಿಷೇಧದ ಹಿನ್ನೆಲಯಲ್ಲಿ ಜಿಲ್ಲೆಯಲ್ಲಿ ನಿರ್ಮಿತಿ ಕೇಂದ್ರದ, ಜಿಪಂ, ತಾಪಂ ಸೇರಿದಂತೆ ವಿವಿಧ ಇಲಾಖೆಯ ಸಾಕಷ್ಟು ಕಾಮಗಾರಿಗಳು ನಡೆಯದೆ ಹಾಗೇ ಉಳಿದುಕೊಂಡಿರುವದರಿಂದ ಅದನ್ನು ಮುಗಿಸಲು ಮರಳು ದಾಸ್ತಾನು ನಡೆಯುತ್ತಿದೆ. ಆದರೆ ಏಕಕಾಲಕ್ಕೆ ಈ ರೀತಿ ಶೇಖರಣೆ ಮಾಡುವದರ ಬಗ್ಗೆ ಸಾರ್ವಜನಿಕರಲ್ಲಿ ಅಸಮಧಾನ ಎದ್ದಿದೆ. ಜಿಲ್ಲೆಯಲ್ಲಿ ಮರಳು ತೆಗೆಯಲು ಪರವಾನಗಿ ಲಭಿಸಲಾರಂಭಿಸಿ ಎರಡು ವಾರ ಕಳೆದರೂ ಸಾರ್ವಜನಿಕರಿಗೆ ಮರಳು ಸೂಕ್ತ ರೀತಿಯಲ್ಲಿ ಲಭಿಸುತ್ತಿಲ್ಲ. ಹೀಗಿರುವಾಗ ಜಿಲ್ಲಾಡಳಿತವೇ ದಾಸ್ತಾನು ನಡೆಸಿದರೆ ಗುತ್ತಿಗೆದಾರರ ಬಳಿ ಲಭ್ಯವಿರುವ ಮರಳನ್ನು ಖರಿದಿಸಲಾಗದ ಪರಿಸ್ಥಿತಿಯಲ್ಲಿ ಜನರಿದ್ದಾರೆ.
Leave a Comment