ದಾಂಡೇಲಿ :
ಹುಬ್ಬಳ್ಳಿಯ ಎಂ.ಬಿ.ಹುರಳಿಕೊಪ್ಪಿ ಟ್ರಸ್ಟ್, ಅಶೋಕ ಆಸ್ಪತ್ರೆ, ನಗರದ ಬಸವೇಶ್ವರ ಸಹಾಕರಿ ಪತ್ತಿನ ಸಂಘ, ವೀರಶೈವ ಸೇವಾ ಸಂಘ, ಶ್ರೀ ವೀರಭದ್ರೇಶ್ವರ ದೇವಸ್ಥಾನ ಸಮಿತಿ, ಅಕ್ಕನ ಬಳಗ, ಚನ್ನಬಸವ ಯುವಕ ಮಂಡಳಗಳ ಆಶ್ರಯದಡಿ ನಗರದಲ್ಲಿ ಉಚಿತ ನೇತ್ರ ತಪಾಸಣಾ ಹಾಗೂ ಶಸ್ತ್ರ ಚಕಿತ್ಸಾ ಶಿಬಿರ ನಡೆಯಿತು.
ನಗರಸಭೆಯ ಅಧ್ಯಕ್ಷ ನಾಗೇಶ ಸಾಳುಂಕೆಯವರು ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತ ದಾಂಡೇಲಿ ಕೈಗಾರಿಕಾ ನಗರ ಇಲ್ಲಿ ಬಡವರು, ಕೂಲಿ ಕಾರ್ಮಿಕರು ಬಹುಸಂಖ್ಯೆಯಲ್ಲಿ ವಾಸವಿದ್ದು, ಆರೋಗ್ಯವನ್ನು ಕಾಪಾಡಿಕೊಳ್ಳಲು ಖರ್ಚು ಮಾಡುವುದು ಕಷ್ಟಸಾಧ್ಯ, ಇಂತಹ ಶಿಬಿರಗಳು ನಗರದಲ್ಲಿ ಹೆಚ್ಚಚ್ಚು ನಡೆಯಬೇಕು ಎಂದರು.
ವೇದಿಕೆಯಲ್ಲಿ ಹುಬ್ಬಳ್ಳಿಯ ನೇತ್ರ ತಜ್ಞ ಡಾ.ಅಶೋಕ ಬಂಗಾರಶೆಟ್ಟರ, ಡಾ.ವರ್ಷಾ ಬಂಗಾರಶೆಟ್ಟರ, ದಾಂಡೇಲಿಯ ಹಿರಿಯ ವೈದ್ಯ ಡಾ.ಎನ್.ಜಿ.ಬ್ಯಾಕೋಡ, ಪಿಎಸ್ಐ ಕುಮಾರ ಹಾಡಕರ್, ಬಸವೇಶ್ವರ ಸಹಾಕರಿ ಪತ್ತಿನ ಸಂಘದ ಅಧ್ಯಕ್ಷ ಅಶೋಕ ಪಾಟೀಲ ಮುಂತಾದವರು ಉಪಸ್ಥಿರಿದ್ದರು.
ವೀರಭದ್ರೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಎಸ್.ಎಂ.ಪಾಟೀಲ ಸ್ವಾಗತಿಸಿ, ನಿರೂಪಿಸಿ ಕೊನೆಯಲ್ಲಿ ವಂದಿಸಿದರು.
Leave a Comment