ದಾಂಡೇಲಿ :
ಅಂಜುಮಾನ್ ಫಲಾಹುಲ್ ಮುಸ್ಲಿಮಿನ್ ಸಂಸ್ಥೆಯು ಸಮುದಾಯವನ್ನು ಸದೃಢಗೊಳಿಸುವುದರ ಜೊತೆಗೆ ಸ್ವಸ್ಥ ಸಮಾಜ ನಿರ್ಮಾಣದ ಸಂಕಲ್ಪವನ್ನು ಹೊಂದಿದ್ದು, ಈ ನಿಟ್ಟಿನಲ್ಲಿ ನಮ್ಮ ಅವಧಿಯಲ್ಲಿ ಜನಪರ ಸೇವೆಗೆ ಮೊದಲ ಆಧ್ಯತೆ ನೀಡಿದ್ದೇವೆಯೆಂದು ನಗರದ ಅಂಜುಮನ್ ಫಲಾಹುಲ್ ಮುಸ್ಲಿಮಿನ್ ಸಂಸ್ಥೆಯ ನಿರ್ಗಮಿತ ಅಧ್ಯಕ್ಷ ತಸ್ವರ್ ಸೌದಗರ್ ಅವರು ಹೇಳಿದರು.
ಅವರು ಮಂಗಳವಾರ ನಗರದ ಸ್ಟೇಟ್ ಎಂಪೊರಿಯಂ ವನತಿ ಗೃಹದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. ಈ ಅಂಜುಮಾನ್ ಫಲಾಹುಲ್ ಸಂಸ್ಥೆಯ ಆಡಳಿತಾವಧಿ ಮೂರು ವರ್ಷದವರೆಗೆ ಸೀಮಿತವಿದ್ದು, ತಾಂತ್ರಿಕ ಕಾರಣದಿಂದಾಗಿ ಈ ವರ್ಷ ನಾಲ್ಕನೆ ವರ್ಷಕ್ಕೆ ಮುಂದುವರಿದಿದೆ. ಬರುವ ಜೂನ್ : 20 ಕ್ಕೆ ಅವಧಿ ಮುಕ್ತಾಯವಾಗಲಿದ್ದು, ಆ ಬಳಿಕ ಸಂಸ್ಥೆಗೆ ಚುನಾವಣೆ ನಡೆಸುವಂತೆ ವಕ್ಪ್ ಬೋರ್ಡಿಗೆ ಲಿಖಿತ ಪತ್ರ ಬರೆದು ವಿನಂತಿಸುವುದಾಗಿ ಹೇಳಿದರು.
ತನ್ನ ಆಡಳಿತಾವಧಿಯಲ್ಲಿ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರುಗಳು ಮತ್ತು ಸಮುದಾಯದ ಸರ್ವ ಜನತೆಯ ಸಹಕಾರದಲ್ಲಿ ಸಮುದಾಯದ ಬಡ ಮಕ್ಕಳ ಶಿಕ್ಷಣಕ್ಕಾಗಿ ರೂ: 2,35,470/-, ಬಡ ಜನರ ಮಕ್ಕಳ ಮದುವೆಗಾಗಿ ರೂ: 90,950/- ಮತ್ತು ಬಡ ಜನರ ಆರೋಗ್ಯ ಚಿಕಿತ್ಸೆಗಾಗಿ ರೂ:1,11,690/ ನ್ನು ಖರ್ಚು ಮಾಡಲಾಗಿದೆ. ರೂ: 4,11,600/- ವೆಚ್ಚದಲ್ಲಿ 686 ಹುಡುಗರಿಗೆ ಉಚಿತ ಖತ್ನಾ (ಮುಂಜಿ) ಕಾರ್ಯಕ್ರಮವನ್ನು ಹಾಗೂ ಸಮುದಾಯದ ಜನರಿಗೆ ವಿವಿಧ ತರಬೇತಿಗಳನ್ನು ನೀಡಿದ್ದೇವೆ ಎಂದು ತಸ್ವರ್ ಸೌದಗರ್ ಅವರು ಹೇಳಿದರು.
ಸಮುದಾಯದ ಜನ ಸಾಮಾನ್ಯರ ಕಷ್ಟ ಸುಖಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಅಂಜುಮನ್ ಫಲಾಹುಲ್ ಮುಸ್ಲಿಮಿನ್ ಸಂಸ್ಥೆ ತನ್ನದೇ ಆದ ಜವಾನ್ದಾರಿಯನ್ನು ನಿಭಾಯಿಸಿದೆ. ಸಂಸ್ಥೆಯ ಅಡಿಯಲ್ಲಿ ನಗರದ ಟೌನ್ಶೀಪ್ ಪೈಜಲ್ ಮಸೀಧಿಯ ಆವರಣದಲ್ಲಿ ಶಾದಿ ಮಹಲ್ ಕಟ್ಟಡ ನಿರ್ಮಾಣಕ್ಕೆ ವಕ್ಪ್ ಬೋರ್ಡಿನಿಂದ ರೂ: 20 ಲಕ್ಷ, ಅಲ್ಪಸಂಖ್ಯಾತ ಇಲಾಖೆಯಿಂದ ರೂ: 10 ಲಕ್ಷ ಹಾಗೂ ವಿಶೇಷವಾಗಿ ಸಚಿವ ಆರ್.ವಿ.ದೇಶಪಾಂಡೆಯವರು ರೂ:40 ಲಕ್ಷ ಮಂಜೂರು ಮಾಡುವುದರ ಮೂಲಕ ನಮ್ಮ ಸಮಾಜದ ಅಭ್ಯುದಯಕ್ಕೆ ಅವಿರತ ಶ್ರಮಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ತಸ್ವರ್ ಸೌದಗರ್ ಹೇಳಿದರು.
ಸಂಸ್ಥೆಯ ಪ್ರಗತಿಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆಯವರ ಹಾಗೂ ಅಲ್ಪಸಂಖ್ಯಾತ ಇಲಾಖೆಯ ಸಚಿವ ತನ್ವಿರ್ ಸೇಠ್ ಅವರುಗಳ ಮಾರ್ಗದರ್ಶನ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಅವರ ಮಾರ್ಗದರ್ಶನ, ಅಲ್ಪಸಂಖ್ಯಾತ ಇಲಾಖೆಯ ಎಲ್ಲ ಹಿರಿ, ಕಿರಿಯ ಅಧಿಕಾರಿಗಳ ಸಹಕಾರ, ಸಮುದಾಯದ ಧರ್ಮಗುರುಗಳ ಆಶೀರ್ವಾದ, ಸಂಸ್ಥೆಯ ಪದಾಧಿಕಾರಿಗಳ ಮತ್ತು ಸದಸ್ಯರ ಪ್ರೋತ್ಸಾಹ, ಸಹಕಾರ ಹಾಗೂ ನಗರದ ವಿವಿಧ ರಾಜಕೀಯ ಪಕ್ಷಗಳು ಮತ್ತು ವಿವಿಧ ಧರ್ಮಬಾಂಧವರು ವಿಶೇಷ ರೀತಿಯ ಸಹಕಾರವನ್ನು ನೀಡುತ್ತಾ ಬಂದಿರುವುದರಿಂದ ಸಂಸ್ಥೆ ದಿನದಿಂದ ದಿನಕ್ಕೆ ಪ್ರಗತಿಯ ಪಥದತ್ತ ಸಾಗಿದೆ. ಈ ಸಾಧನೆಗೆ ಕಾರಣರಾದ ಸರ್ವರಿಗೂ ಅಂಜುಮನ್ ಫಲಾಹುಲ್ ಮುಸ್ಲಿಮಿನ್ ಸಂಸ್ಥೆಯ ಪರವಾಗಿ ತಸ್ವರ್ ಸೌದಗರ್ ಅವರು ಕೃತಜ್ಞತೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಂಜುಮನ್ ಫಲಾಹುಲ್ ಮುಸ್ಲಿಮಿನ್ ಸಂಸ್ಥೆಯ ಪದಾಧಿಕಾರಿಗಳು ಮತ್ತು ಸದಸ್ಯರುಗಳಾದ ಆದಂ ಶೇಖ, ಅನ್ವರ್ ಪಠಾಣ್, ಅಬ್ದುಲ್ ರಹೀಂ ತಾರುಮೀಯ, ಅಬುತಾರ್ ನೂರುಜಿ ನಾಯಕ್, ಶರೀಪ ಜತ್ತಿಗಾರ್, ಮಸ್ತಾನ್ ಸಾಬ ಅತ್ತಾರ, ಮಹಮ್ಮದ ಗೌಸ್ ಖತೀಬ, ಅಬ್ದುಲ್ ಗಪಾರ್ ಸಾಬ ದೇವಲತ್ತಿ, ಇಮಾಮ ಖಾಸಿಂ ಪಾರಿಶ್ವಾಡಿ, ಮೆಹಬೂಬು ಸಾಬ ಅನ್ಸಾರ್, ಮದರ್ ಸಾಬ ತೊಟಗಟ್ಟಿ ಮೊದಲಾದವರು ಉಪಸ್ಥಿತರಿದರು.
Leave a Comment