ಹೊನ್ನಾವರ ಗೇರಸೋಪ್ಪಾ-
ಸಂಸ್ಕøತ ಭಾಷೆ ಆತ್ಮ ಸಂಸ್ಕಾರವನ್ನು ನೀಡುತ್ತದೆ. ರಾಷ್ಟೀಯ ಭಾವೈಕ್ಯತೆ ಸಂಸ್ಕøತ ಭಾಷೆಯ ಮೂಲಕ ಸುಲಭ ಸಾಧ್ಯ. ಬೇರೆ ಬೇರೆ ರಾಜ್ಯದ ಜನರೆಲ್ಲ ಒಂದೇ ಭಾಷೆಯ ಮೂಲಕ, ಸಂಸ್ಕøತ ಭಾಷೆಯ ಮೂಲಕ ದೇಶದ ಐಕ್ಯತೆಯನ್ನು ಸಾರಬಲ್ಲರು. ವಿಜ್ಞಾನದ ಮುಖ್ಯವಾಹಿನಿಯಲ್ಲಿ ಸಂಸ್ಕøತ ಭಾಷೆ ಪ್ರಾಮುಖ್ಯತೆಯನ್ನು ಪಡೆದು ಸೈ ಎನಿಸಿಕೊಂಡಿದೆ. ಅಂದರೆ ಪ್ರಾಚೀನ-ಅರ್ವಾಚೀನ-ವರ್ತಮಾನಗಳ ಸರ್ವಸಮ್ಮತ ಭಾಷೆ ಸಂಸ್ಕøತ. ಇಂತಹ ಸಂಸ್ಕøತ ಭಾಷೆಯ ವರ್ಗಗಳು ದೇಶದ ಎಲ್ಲಡೆ ನಡೆದು ಸಮಾಜಿಕ ಸ್ವಾಸ್ವಕ್ಕೆ ಬದ್ರಬುನಾದಿ ಹಾಡಲಿ ಎಂದು ಬಂಗಾರಮಕ್ಕಿಯ ಪರಮ ಪೂಜ್ಯ ಶ್ರೀ ಮಾರುತಿ ಗುರೂಜಿಯವರು ಹಾರೈಸಿದರು.
ಪ್ರಾಂತಾಧ್ಯಕ್ಷ ಶ್ರೀ ವಿ.ಜಿ.ಹೆಗಡೆ ಗುಡ್ಗೆ ಮಾತನಾಡಿ ಸಂಸ್ಕøತ ಭಾಷೆಯಲ್ಲಿ ಮಾತನಾಡುವ ಕಲೆಯನ್ನು ಜನ ಸಾಮಾನ್ಯರು ಮಾಡುವ ಮೂಲಕ ಸರ್ವರ ಜನಭಾಷೆ ಸಂಸ್ಕøತ ಎಂದರು. 13ನೇ ವರ್ಷ ಬಂಗಾರಮಕ್ಕಿಯಲ್ಲಿ ರಾಜ್ಯದ 15 ಪ್ರದೇಶಗಳಿಂದ 50 ವಿದ್ಯಾರ್ಥಿಗಳು ಭಾಗವಹಿಸಿ, ಜನ ಸಾಮಾನ್ಯರಿಗೆ ಭಾಷೆಯ ಸುಲಭತ್ವವನ್ನು ಸಾರಿದರು. ಸಂಸ್ಕøತ ಭಾರತೀಯ ಸಂಘಟನಾ ಮಂತ್ರಿ ಶ್ರೀ ರಾಮಕೃಷ್ಣರು ಸಂಸ್ಕøತ ಭಾಷೆ ವಿದೇಶೀಯರ ಆಡಳಿತದಿಂದ ನಾಶವಾಯಿತು. ಪುನಃ ಅದನ್ನು ಜನ ಮಾನಸದಲ್ಲಿ ತರಬೇಕೆಂದರು. ಸ್ವಾಗತವನ್ನು ದುೃವ ತದ್ದಲಸೆಯವರು ಕೋರಿದರು. ಕವನಾ ಹುಬ್ಬಳ್ಳಿ ಧನ್ಯಾವಾದ ಸಮರ್ಪಣೆ ಮಾಡಿದಳು. ಸತೀಶ ಮೂರೂರು ಕಾರ್ಯಕ್ರಮವನ್ನು ನಿರ್ವಹಿಸಿದರು. ಪ್ರಾರ್ತನೆಯನ್ನು ಹುಬ್ಬಳ್ಳಿಯ ವಿದ್ಯಾರ್ಥಿನಿಯರು ಶುಶ್ರಾವ್ಯವಾಗಿ ಹಾಡಿದರು ಹಾಗೂ ಶಿಬಿರಾರ್ಥಿಗಳಿಂದ ಅನೇಕ ಮನರಂಜನಾ ಕಾರ್ಯಕ್ರಮಗಳು ಸಂಸ್ಕøತ ಭಾಷೆಯಲ್ಲಿ ನಡೆಸಿದ್ದರು ಹೀಗೆ ಸಂಸ್ಕøತ ಭಾಷಾ ವರ್ಗ ಶಿಬಿರವು ಮುಕ್ತಾಯ ಗೊಂಡಿತು.
Leave a Comment