ಹೊನ್ನಾವರ-
ಹೊನ್ನಾವರ, ಭಟ್ಕಳ ಹಾಗೂ ಕುಮಟಾ ತಾಲೂಕಿನ ಜನರಿಗೆ ಅನೂಕುಲವಾಗುವ ಹೊನ್ನಾವರ ತಾಳಗುಪ್ಪ ರೈಲ್ವೆ ಮಾರ್ಗವನ್ನು ಕೂಡಲೇ ಆರಂಭಿಸಬೇಕೆಂದು ಕೇಂದ್ರ ರೈಲ್ವೆ ಸಚಿವ ಸುರೇಶ ಪ್ರಭುರವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಹೊನ್ನಾವರ ಘಟಕದ ಅಧ್ಯಕ್ಷ ಉದಯರಾಜ ಮೇಸ್ತ ಮನವಿ ಮಾಡಿಕೊಂಡಿದ್ದಾರೆ.
ಹೊನ್ನಾವರ ರಾಜ್ಯದಲ್ಲಿಯ ಅತೀ ಹೆಚ್ಚು ಗ್ರಾಮಗಳನ್ನು ಹೊಂದಿರುವ ತಾಲೂಕಾಗಿದ್ದು, ಇತಿಹಾಸ ಫ್ರಸಿದ್ದ ವ್ಯಾಪಾರ ಕೇಂದ್ರವಾಗಿತ್ತು. ಇಲ್ಲಿ ನಿತ್ಯವು ಸಾವಿರಾರು ಜನರು ವ್ಯಾಪಾರ ವಹಿವಾಟುಗಳಿಗಾಗಿ ಪ್ರಯಾಣಕ್ಕೆ ರೈಲ್ವೆ ಸೌಕರ್ಯ ಅವಶ್ಯವಾಗಿದೆ. ಆದ್ದರಿಂದ ಹೊನ್ನಾವರ ತಾಳಗುಪ್ಪಾ ರೈಲ್ವೆ ಮಾರ್ಗಕ್ಕೆ ಹಲವು ವರ್ಷಗಳಿಂದ ಈ ಬಾಗದ ಜನರ ಬೇಡಿಕೆ ಇದ್ದು ತಕ್ಷಣವೇ ಚಾಲನೆ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಅಲ್ಲದೇ ಹೊನ್ನಾವರ ರೈಲ್ವೆ ನಿಲ್ದಾಣದಲ್ಲಿ ಕೆಲವು ರೈಲುಗಳಿಗೆ ಅವಶ್ಯವಾಗಿ ನಿಲುಗಡೆ ನೀಡಬೇಕಾಗಿದೆ.ಆದ್ದರಿಂದ ನೇತ್ರಾವತಿ ಎಕ್ಸಪ್ರೆಸ್,ಮಂಗಳೂರು ಸಿ.ಎಸ್.ಟಿ ರೈಲುಗಳಿಗೆ ನಿಲುಗಡೆ ನಿಡಬೇಕು. ಮಂಕಿ ನಿಲ್ದಾಣದಲ್ಲಿ ಮತ್ಸಗಂಧಾ ರೈಲಿಗೆ ನಿಲುಗಡೆ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಜೂನ್ 1 ರಂದು ಕಾರವಾರಕ್ಕೆ ಕೇಂದ್ರ ರೈಲ್ವೆ ಸಚಿವ ಸುರೇಶ ಫ್ರಭುರವರು ಆಗಮಿಸಲಿದ್ದು ಕನ್ನಡ ಅಭಿಮಾನ ಸಂಘ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯೂ ಸಾರ್ವಜನಿಕರ ಪರವಾಗಿ ನಿಯೋಗ ತೆರಳಿ ಸಚಿವರಿಗೆ ಮನವಿ ಸಲ್ಲಸಲಿದೆ ಎಂದು ಉದಯರಾಜ ಮೇಸ್ತರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment