ಹೊನ್ನಾವರ:
ತಾಲ್ಲೂಕಿನ ಚಿಕ್ಕನಕೋಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೆರಾವಲಿ ಗ್ರಾಮದಲ್ಲಿನ ಗುರಿಯನಕಟ್ಟೆ-ಬಡ್ನಕೋಡ್ಲ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಮಂಕಾಳ ಎಸ್.ವೈದ್ಯ ಗುದ್ದಲಿಪೂಜೆ ನೆರವೇರಿಸಿದರು.
ಸುವರ್ಣ ಗ್ರಾಮೋದಯ ಯೋಜನೆಯಡಿ ಮಂಜೂರಾಗಿರುವ 1 ಕೋಟಿ ರೂ.ವೆಚ್ಚದ ಈ ರಸ್ತೆ ಗುರಿಯನಕಟ್ಟೆಯಿಂದ ಬೀಳ್ಮಕ್ಕಿ ಹಾಗೂ ಅಪಗಾಲ ಮಾರ್ಗವಾಗಿ ಬಡ್ನಕೋಡ್ಲ ಗ್ರಾಮದ ವರೆಗೆ ಸಂಪರ್ಕ ಕಲ್ಪಿಸಲಿದೆ.
ಇದೇ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಲ್ಯಾಂಡ್ ಆರ್ಮಿ 30 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಿರುವ ಜತ್ತುಕ್ಕಿ-ಆದಿಶಕ್ತಿ ದೇವಸ್ಥಾನ ಸಿಮೆಂಟ್ ರಸ್ತೆಗೆ ಶಾಸಕ ವೈದ್ಯ ಚಾಲನೆ ನೀಡಿದರು.
ಜತ್ತುಕ್ಕಿಯಿಂದ ರಸ್ತೆಯನ್ನು ಆರಂಭಿಸಿ’ಎಂದು ಹೆರಾವಲಿ,ದೇವರಮಕ್ಕಿ ಭಾಗದ ಜನರು ಶಾಸಕರಿಗೆ ಮನವಿ ಅರ್ಪಿಸಿದರು.ಜನರ ಮನವಿಯನ್ನು ಸ್ವೀಕರಿಸಿದ ಶಾಸಕರು ಮಾತನಾಡಿ,ಈ ಕುರಿತಂತೆ ಅಗತ್ಯ ಪ್ರಯತ್ನ ಕೈಗೊಳ್ಳುವ ಭರವಸೆ ನೀಡಿದರು.
ಮಾಜಿ ಸೈನಿಕ ವಾಮನ ಎಸ್.ನಾಯ್ಕ,ತಾಲ್ಲೂಕು ಪಂಚಾಯ್ತಿ ಸದಸ್ಯ ಆರ್.ಪಿ.ನಾಯ್ಕ,ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನಾಗವೇಣಿ ಗಣಪತಿ ನಾಯ್ಕ,ಸದಸ್ಯ ನಾಗೇಶ ನಾಯ್ಕ ಬೀಳ್ಮಕ್ಕಿ,ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಕೃಷ್ಣ ಗೌಡ,ಊರಿನ ಪ್ರಮುಖರಾದ ಎಚ್.ಎಲ್.ಗುರುದತ್ತ,ಕೇಶವ ಭಟ್ಟ ಅಪಗಾಲ್,ನಾಗರಾಜ ಹೆಗಡೆ,ಎಚ್.ಎಸ್.ಪ್ರಭಾಕರಮೂರ್ತಿ,ಗಜಾನನ ನಾಯ್ಕ ಬಡ್ನಕೋಡ್ಲ ಮತ್ತಿತರರು ಹಾಜರಿದ್ದರು.
Leave a Comment