ಹಳಿಯಾಳ ;
ಎಂದು ಕಾಣದಂತ ಬಿರು ಬಿಸಿಲಿನ ತಾಪದಿಂದ ಬರಗಾಲದಂತಹದ ಕಠಿಣ ಪರಿಸ್ಥಿತಿ ಎದುರಿಸಿದ ಹಳಿಯಾಳ ತಾಲೂಕಿಗೆ ಮಂಗಳವಾರ ಸಾಯಂಕಾಲದಿಂದಲೇ ಮುಂಗಾರು ಆಗಮನವಾಗಿದ್ದು ಬುಧವಾರ ಸಾಯಂಕಾಲದವರೆಗೆ ಬಿಡುವಿಲ್ಲದಂತೆ ಮೇಘರಾಜ ಅಬ್ಬರಿಸಿದ್ದು ರೈತ ಸಮುದಾಯದಲ್ಲಿ ಹರ್ಷದ ಹೊನಲು ಮನೆ ಮಾಡಿದೆ.
ಮಲೆನಾಡು ಆಗಿರುವ ಅರಣ್ಯದಿಂದ ಆವೃತವಾಗಿರುವ ಹಳಿಯಾಳ ತಾಲೂಕು ಇದೆ ಪ್ರಥಮ ಬಾರಿಗೆ ಸುಮಾರು 36 ಡಿಗ್ರಿ ನಷ್ಟು ಭೀಕರ ಬಿಸಿಲಿನ ತಾಪವನ್ನು ಅನುಭವಿಸಿ ಜನತೆ ಕಂಗಾಲಾಗಿದ್ದರು. ಅಲ್ಲದೇ ಬರಗಾಲದಂತಹ ಘೋರ ಪರಿಸ್ಥಿತಿಯಿಂದ ರೈತ ಸಮುದಾಯದ ಸಾಕಷ್ಟು ನಷ್ಟ ಅನುಭವಿಸಿತ್ತು. ಆಧರೇ ಇ ಬಾರಿ ಮುಂಗಾರು ಅತಿ ಬೇಗನೆ ಹಳಿಯಾಳಕ್ಕೆ ಕಾಲಿಟ್ಟಂತೆ ತೊರುತ್ತಿದ್ದು ದಿ.30 ಮಂಗಳವಾರ ರಾತ್ರಿಯಿಂದಲೇ ಮಳೆ ಪ್ರಾರಂಭವಾಗಿದ್ದು ಬುಧವಾರ ಬೆಳಿಗ್ಗೆಯಿಂದ ದಟ್ಟ ಮೊಡ ಕವಿದ ವಾತಾವರಣದಿಂದ ಸಾಯಂಕಾಲದವರೆಗೆ ಬಿಡುವಿಲ್ಲದಂತೆ ಮಳೆಯಾಗಿದ್ದು ಭೂಮಿ ತಂಪಾಗಿಸಿದೆ. ಇದೇ ರೀತಿ ಉತ್ತಮ ಮಳೆ ಆದರೇ ಈ ಬಾರಿ ಉತ್ತಮ ಫಸಲು ರೈತರ ಕೈ ಸೇರಲಿದೆ ಎಂಬುದು ಕೃಷಿಕರ ಮಾತು.
Leave a Comment