ಕಾರವಾರ:
ಮಾಜಿ ಮುಖ್ಯ ಮಂತ್ರಿ ಬಿ. ಎಸ್. ಯಡಿಯೂರಪ್ಪ ನಂದನಗದ್ದಾದ ಅಂಬೇಡ್ಕರ್ ಕಾಲೋನಿಗೆ ಭೇಟಿ ನೀಡಿ ಹಿಂತಿರುಗುತ್ತಿದ್ದ ವೇಳೆ ದಾರಿ ಮದ್ಯೆಯೇ ವ್ಯಕ್ತಿಯೊಬ್ಬರು ಪಿಡ್ಸ ಬಂದು ರಸ್ತೆ ಪಕ್ಕ ಹೊರಳಾಡುತ್ತಿದ್ದರು. ಆದರೆ, ಯಾವ ಮುಖಂಡರೂ ಅವರನ್ನು ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡಲಿಲ್ಲ. ಸಾಲು ಸಾಲು ವಾಹನಗಳು ಸಂಚರಿಸುತ್ತಿರುವದರಿಂದ ಇತರರಿಗೂ ರೋಗಿಯನ್ನು ಆಸ್ಪತ್ರೆಗೆ ಸೇರಿಸಲು ಸಾದ್ಯವಾಗಲಿಲ್ಲ.
ಅಂಬೇಡ್ಕರ್ ಕಾಲೋನಿಯ ಮಾಲಾ ಹುಲಸ್ವಾರ್ ಮನೆಯಲ್ಲಿ ಉಪಹಾರ ಸ್ವೀಕರಿಸಿ ದಲಿತ ಕುಟುಂಬಗಳ ಜೊತೆ ಸಂವಾದ ನಡೆಸಿದ ಬಳಿಕ ಯಡಿಯೂರಪ್ಪ ಹಾಗೂ ಬಿಜೆಪಿ ಮುಖಂಡರು ವಾಹನಗಳ ಮೂಲಕ ತೆರಳುತ್ತಿದ್ದರು. ನಡುರಸ್ತೆಯಲ್ಲಿಯೇ ಪಿಟ್ಸ ತಗುಲಿದ ವ್ಯಕ್ತಿ ಹೊರಳಾಡಿದರೂ ಯಾವ ನಾಯಕರೂ ಅತ್ತ ಗಮನ ನೀಡಲಿಲ್ಲ. ವಾಹನಗಳೆಲ್ಲ ತೆರಳಿದ ಮೇಲೆ ಕುಟುಂಬದವರೇ ರೋಗಿಗೆ ಆರೈಕೆ ಮಾಡಿದರು.
Leave a Comment