ಕಾರವಾರ:
ಕುಮಟಾದ ಹೊಲನಗದ್ದೆಯಲ್ಲಿ ಸಿ.ಆರ್.ಜಡ್ ನಿಯಮಗಳನ್ನು ಉಲ್ಲಂಗಿಸಿ ಅಶ್ವಿನಿಧಾಮ ಎಂಬ ಹೆಸರಿನಲ್ಲಿ 9 ಕಟ್ಟಡಗಳನ್ನು ನಿರ್ಮಿಸಲಾಗಿದ್ದು, ಕಾನೂನು ಬಾಹಿರವಾಗಿ ಅನೈತಿಕ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದು ಮೀನುಗಾರ ಮುಖಂಡ ಸದಾನಂದ ಹರಿಕಂತ್ರ ಆರೋಪಿಸಿದರು.
ಗುರುವಾರ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಜಿಲ್ಲಾಡಳಿತ ಹಾಗೂ ಸ್ಥಳೀಯ ಗ್ರಾಮ ಪಂಚಾಯತಗೆ ದೂರು ನೀಡಿದರೂ ಕ್ರಮ ಜರುಗಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯ ಗ್ರಾಮ ಪಂಚಾಯತದಲ್ಲಿ ಈ ಹಿಂದೆ ಆಡಳಿತ ನಡೆಸಿದವರು ಹುನ್ನಾರ ನಡೆಸಿ ವ್ಯಕ್ತಿಯೊಬ್ಬರಿಗೆ ಅಶ್ವಿನಿಧಾಮ ನಡೆಸಲು ಸಹಕರಿಸಿದ್ದಾರೆ. ಇಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳನ್ನು ತಡೆಯುವಂತೆ ಸ್ಥಳೀಯರು ಆಗ್ರಹಿಸಿದರೂ ಯಾವದೇ ಪ್ರಯೋಜನವಾಗಿಲ್ಲ ಎಂದು ದೂರಿದರು. ಒಂದಡೆ ಅಶ್ವಿನಿಧಾಮ ಚಿಕಿತ್ಸಾಲಯ ಎಂದಿದ್ದು, ಇನ್ನೊಂದಡೆ ಅಶ್ವಿನಿಧಾಮ ಹೋಂ ಸ್ಟೇ ಎಂದಿದೆ. ಚಿಕಿತ್ಸಾಲಯ ಹಾಗೂ ಹೋಂ ಸ್ಟೇ ನಡೆಸಲು ಬೇಕಾದ ಯಾವ ಪರವಾನಿಗೆಯೂ ಅಶ್ವಿನಿಧಾಮಕ್ಕಿಲ್ಲ. ಇಲ್ಲಿ ಎಲ್ಲವೂ ಕಾನೂನು ಬಾಹಿರವಾಗಿ ನಡೆಯುತ್ತಿದ್ದು, ಹಿಂದೊಮ್ಮೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದ ಕಾರಣ ಹೆಸ್ಕಾಂ ದಂಡ ವಿಧಿಸಿತ್ತು. ಆದರೆ, ಈಗಲೂ ಅನಧಿಕೃತ ವಿದ್ಯುತ್ ಸಂಪರ್ಕ ಪಡೆಯಲಾಗಿದೆ ಎಂದು ದೂರಿದರು.
ತಾವು ದೂರು ನೀಡಿದಾಗ ಕೆಲ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಆಗಮಿಸಿದ್ದರು. ಆದರೆ, ಅಲ್ಲಿನ ವ್ಯಕ್ತಿಗಳು ಅಧಿಕಾರಿಗಳಿಗೆ ಒಳ ಪ್ರವೇಶ ನಿರ್ಬಂಧಿಸಿದ್ದರು. ಈ ಬಗ್ಗೆ ವರದಿಯಲ್ಲಿಯೂ ಉಲ್ಲೆಖಿಸಲಾಗಿದ್ದು, ಅಕ್ರಮ ಚಟುವಟಿಕೆ ನಡೆಸುತ್ತ ಬಂದವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕಳೆದ ಹಲವು ವರ್ಷಗಳಿಂದ ದೂರು ನೀಡುತ್ತ ಬಂದರೂ ಅದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದ ಅವರು, ಈಗಲೂ ಕ್ರಮ ಕೈಗೊಳ್ಳದಿದ್ದಲ್ಲಿ ನ್ಯಾಯಾಲಯದ ಮೆಟ್ಟಿಲೇರುವದಾಗಿ ಎಚ್ಚರಿಸಿದರು.
Leave a Comment