ದಾಂಡೇಲಿ:
ದೇಶದ ಪ್ರತಿಷ್ಠಿತ ಐಐಟಿಗಳಿಗೆ ಪ್ರವೇಶಕ್ಕಾಗಿರುವ ಜೆ.ಇ.ಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಪಣಂಬೂರು ಕೇಂದ್ರೀಯ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ದಾಂಡೇಲಿಯ ವೈಷ್ಣವಿ ಆರ್.ಲಕ್ಕಲಕಟ್ಟಿಮ್ಮ ರವರು ಕೆಟಗರಿಯಲ್ಲಿ 153 ನೇ ರ್ಯಾಂಕ್ ಹಾಗೂ ಸಾಮಾನ್ಯ ಕೆಟಗರಿಯಲ್ಲಿ 8927 ನೇ ರ್ಯಾಂಕ್ ಗಳಿಸಿ ಐಐಟಿ ಪ್ರವೇಶಾತಿಗೆ ಅರ್ಹತೆ ಪಡೆದಿರುತ್ತಾಳೆ.
ಪಿ.ಯು.ಸಿ.ಯಲ್ಲಿ (12ನೇ ತರಗತಿ) ಶೇ. 95ರಷ್ಟು ಅಂಕಗಳಿಸಿ ಕೇಂದ್ರೀಯ ವಿದ್ಯಾಲಯಕ್ಕೆ ಪ್ರಥಮ, ಮಂಗಳೂರು ವಿದ್ಯಾಲಯಕ್ಕೆ ದ್ವಿತೀಯ ಟಾಪರ್ ಆಗಿದ್ದಳು. ಈಕೆಯ ಸಹೋದರ ಹರ್ಷ ಆರ್. ಲಕ್ಕಲಕಟ್ಟಿ ಸಿ.ಬಿ.ಎಸ್.ಸಿ.ಇ 10 ನೇ ತರಗತಿಯಲ್ಲಿ 10ಕ್ಕೆ 10 ರಷ್ಟು ಸಿಜಿಪಿಎ ಅಂಕಪಡೆದು ಸಾಧನೆ ಮಾಡಿದ್ದಾರೆ.
ಈ ಪ್ರತಿಭಾವಂತ ವಿದ್ಯಾರ್ಥಿಗಳು ಮಂಗಳೂರಿನಲ್ಲಿ ಭಾರತೀಯ ಸ್ಟೇಟ್ ಬ್ಯಾಂಕಿನ ಅಧಿಕಾರಿಯಾಗಿರುವ ದಾಂಡೇಲಿ ಮೂಲದ ಆರ್.ಜಿ. ಲಕ್ಕಲಕಟ್ಟಿ ಯವರ ಮಕ್ಕಳಾಗಿದ್ದಾರೆ.
Leave a Comment