ಹೊನ್ನಾವರ ;
ತಾಲೂಕಿ ನ ಕರ್ಕಿ ಚೆನ್ನಕೇಶವ ಪ್ರೌಢಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕಾಸರಕೋಡಿನ ಸ್ನೇಹ ಕುಂಜದ ವೈದ್ಯೆ ಡಾ. ಚೈತ್ರಾ ಪಂಡಿತ್ರ ಮಾತನಾಡಿ.ಯೋಗ ಅಂದರೆ ಮನಸ್ಸನ್ನು ಪರಮಾತ್ಮನಲ್ಲಿ ಕೇಂದ್ರಿಕರಿಸುವುದು. ಶಾರೀರಿಕ, ಮಾನಸಿಕ, ಭಾವನಾತ್ಮಕ, ಬೌದ್ಧಿಕ, ಆಧ್ಯಾತ್ಮಿಕ ಬೆಳವಣಿಗೆಗಳು ಮನುಷ್ಯನ ಸರ್ವಾಂಗೀಣ ಹಾಗೂ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಿದೆ. ಆಹಾರ, ವಿಹಾರ, ವಿಚಾರ ಈ ಮೂರರಲ್ಲಿ ಆರೋಗ್ಯ ಹಾಗೂ ಆಯುಷ್ಯ ಅಡಗಿದೆ, ಏಕಾಗ್ರತೆ ಮತ್ತು ಕುತೂಹಲಗಳು ಕಲಿಕೆಗೆ ಸಹಕಾರಿಯಾಗಿದೆ ಎಂದುರು,
ಅಧ್ಯಕ್ಷತೆ ವಹಿಸಿದ ಶಾಲಾ ಮುಖ್ಯೋಪಾಧ್ಯಾಯ ಎಲ್. ಎಮ್. ಹೆಗಡೆ ಮಾತನಾಡಿ ಯೋಗವು ಯೋಗ್ಯತೆಯನ್ನು ತಂದುಕೊಡುತ್ತದೆ. ಅಜ್ಞಾನದಿಂದ ಜ್ಞಾನದೆಡೆಗೆ ಕೊಂಡೊಯ್ಯುವಲ್ಲಿ ಯೋಗವು ಸಹಕಾರಿಯಾಗಿದೆ, ಯೋಗದಿಂದ ರೋಗ ಮುಕ್ತರಾಗಬಹುದು ತಿಳಿಸಿದರು.
ಶಿಕ್ಷಕರಾದ ಎಸ್. ಎನ್. ಹೆಗಡೆ ಸ್ವಾಗತಿಸಿದರು. ತಿಮ್ಮಣ ಭಟ್ಟ ವಂದಿಸಿದರು.
Leave a Comment