ದಾಂಡೇಲಿ :
ಸಂಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವಲ್ಲಿ ಸಿಗುವ ತೃಪ್ತಿ ಇನ್ನಾವುದರಲ್ಲಿ ಕೂಡ ಸಿಗುವುದಿಲ್ಲಾ. ಸೇವೆಯೆ ಮೂಲ ಮಂತ್ರವಾಗಿ ಸೇವೆ ಸಲ್ಲಿಸುತ್ತಿರುವ ಅಂತರಾಷ್ಟ್ರಿಯ ಲಯನ್ಸ್ ಸಂಸ್ಥೆ ವಿಶ್ವದಲ್ಲಿ ಈ ವರ್ಷ ತನ್ನ ಸ್ಥಾಪನೆಯ ನೂರನೆ ವರ್ಷ ಆಚರಣೆ ಆಚರಿಸುತ್ತಿದೆ, ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆ ಈ ಸಂಸ್ಥೆಯಿಂದ ಸಿಗುವದು ನಿಶ್ಚಿತ ಎಂದು ಎಂ.ಜೆ.ಎಫ. ಲಯನ್ಸ್ ಡಿ-317-ಬಿನ ಪ್ರಥಮ ಜಿಲ್ಲಾ ಪ್ರಾಂತಪಾಲೆ ಮೊನಿಕಾ ಸಾವಂತ ನುಡಿದರು.
ಅವರು ನಗರದ ಕಾಗದ ಕಾರ್ಖಾನೆಯ ಡಿಲಕ್ಸ್ ಸಭಾಂಗಣದಲ್ಲಿ ಶನಿವಾರ ಸಂಜೆ ಏರ್ಪಡಿಸಲಾದ ಸ್ಥಳೀಯ ಅಂಬಿಕಾನಗರ-ದಾಂಡೇಲಿ ಲಯನ್ಸ್ ಕ್ಲಬಿನ 2017-2018ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಿಗೆ ಪದಗ್ರಣದ ಬೊಧÀನೆ ನೆರವೆರಿಸಿ ಮಾತನಾಡುತ್ತಾ ಸ್ಥಳೀಯ ಅಂಬಿಕಾನಗರ-ದಾಂಡೇಲಿ ಲಾಯನ್ಸ್ ಕ್ಲಬನ ಕಾರ್ಯ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಅಂತರಾಷ್ಟ್ರಿಯ ಲಯನ್ಸ್ ಸಂಸ್ಥೆ ತನ್ನ ನೂರನೆ ವರ್ಷದ ಆಚರಣೆಯ ಸಂದರ್ಭದಲ್ಲಿ ಶಾಶ್ವತ ಯೋಜನೆಗಳಿಗಾಗಿ ಹಲವು ರಾಷ್ರಮಟ್ಟದ ಸಂಘ ಸಂಸ್ಥೆಗಳೊಂದಿಗೆ ಹಣಕಾಸಿನ ಸಹಾಯ ನೀಡುವ ಒಡಂಬಡೀಕೆ ಮಾಡಿ ಕೊಂಡಿದೆ ಇದರ ಲಾಭ ಪಡೆದು ಬದಜನರ ಉದ್ಧಾರಕ್ಕೆ ಲಯನ್ಸ್ ಸದಸ್ಯರು ಮುಂದೆ ಬರಬೇಕು ಎಂದು ಅವರು ನುಡಿದರು.
ಮುಖ್ಯ ಅತಿಥಿಯಾಗಿ ಹಳಿಯಾಳದ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೇಶ ಮಾತನಾಡಿ ಇಂದು ನಿಸರ್ಗದಲ್ಲಿ ನಾವು ಬದುಕಲು ಪಡೆಯುವ ನೀರು, ಗಾಳಿಯ ಸದು ಉಪಯೋಗ ಅವುಳ ಸಂರಕ್ಷಣೆಗೆ ಹೆಚ್ಚಿನ ಅರಿವನ್ನು ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ನೀಡಬೇಕಾಗಿದೆ ಎಂದರು.
ಗೌರವ ಅತಿಥಿಗಳಾಗಿ ಮಾತನಾಡಿದ ನಗರಸಭೆಯ ಅಧ್ಯಕ್ಷ ನಾಗೇೀಶ ಸಾಳುಂಕೆ ಹಾಗು ಸ್ಥಳೀಯ ವೆಸ್ಟ್ಕೋಸ್ಟ್ ಪೇಪರ್ ಮಿಲ್ಲಿನ ಹಿರಿಯ ಸಂರ್ಪಕ ಅಧಿಕಾರಿ ಕೆ.ಜಿ. ಗಿರಿರಾಜ ಮಾತನಾಡಿ ಸ್ಥಳಿಯ ಲಯನ್ಸ್ ಕ್ಲಬಿನÀ ಎಲ್ಲ ಕೆಲಸ ಕಾರ್ಯಗಳಿಗೆ ಸಂಪೂರ್ಣ ಬೆಂಬಲ ನೀಡುವ ಭರವಸೆಯನ್ನು ನೀಡಿದರು.
ನಗರಸಭೆಯ ಸದಸ್ಯ ಮಾಜಿ ಉಪಾಧ್ಯಕ್ಷ ಅನಿಲ ದಂಡಗಲ್, ಸ್ಥಳೀಯ ಲಯನ್ಸ್ ಕ್ಲಬಿನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಅಂತರಾಷ್ಟೀೀಯ ಲಯನ್ಸ್ ಕ್ಲಬಿನ ನೂರನೆ ವರ್ಷಾಚರಣೆಯ ಸಂದರ್ಭದಲ್ಲಿ ಆಂಬಿಕಾನಗರ- ದಾಂಡೇಲಿ ಕ್ಲಬಿನ ಅಧ್ಯಕ್ಷನಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿರುವದಕ್ಕೆ ಸಂತೋಷ ವ್ಯಕ್ತ ಪಡಿಸಿದರು.
ಎನ್.ವಿ ಪಾಟೀಲ್ ಕಾರ್ಯದರ್ಶಿಯಾಗಿ, ಪ್ರಸಾದ ಶಿರಟ್ಟಿ ಖಜಾಂಚಿಯಾಗಿ ಹಾಗು ಇತರ ಪದಾಧಿಕಾರಿಗಳು ಈ ಸಮಾರಂಭದಲ್ಲಿ ಅಧಿಕಾರ ವಹಿಸಿಕೊಂಡರು.
ಸ್ಥಳೀಯ ವ್ಯಾಪರಸ್ಥರಾದ ಗಣೇಶ ಖಾನಾಪುರ, ನರೇಂದ್ರ ಚವ್ಹಾಣ, ಕೆಸಲ್ರಾಕ್ನ ಆರ್.ಎಫ್.ಓ ನಾಗರಾಜ, ಕ್ಲಬಿನ ನೂತನ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ವಿಕಟಪೂರ್ವ ಕ್ಲಬಿನ ಅಧ್ಯಕ್ಷ ವಿ.ಆರ್. ಹೆಗಡೆ, ನಿಕಟಪೂರ್ವ ಕಾರ್ಯದರ್ಶಿ ವಿರೇಶ, ಕಾರ್ಯದರ್ಶಿ ಎನ್.ವಿ. ಪಾಟೀಲ, ಲಯನ್ಸ್ ಜಿಲ್ಲಾ ಕಾರ್ಯಕಾರಿ ಮಂಡಳಿಯ ಸದಸ್ಯ ಯು.ಎಸ್. ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು.
Leave a Comment