ಹೊನ್ನಾವರ:
ಪಟ್ಟಣದ ನ್ಯೂ ಇಂಗ್ಲಿಷ ಸ್ಕೂಲ್ಗೆ ಭೇಟಿ ನೀಡಿದ ಮೈಸೂರು ರಾಜಮಾತೆ ಡಾ. ಪ್ರಮೋದಾದೇವಿ ಅವರನ್ನು ಶಾಲಾ ಆಡಳಿತ ಮಂಡಳಿ ಸದಸ್ಯರು ಹಾಗೂ ವಿದ್ಯಾರ್ಥಿಗಳು ಸ್ವಾಗತಿಸಿ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಮೋದಾದೇವಿ ಮಾತನಾಡಿ ಅಧ್ಯಾಪಕ ವೃತ್ತಿಯೊಂದಿಗೆ ತಮ್ಮ ಕುಟುಂಬದ ಪ್ರೀತಿಯನ್ನು ನೆನಪಿಸಿಕೊಂಡು, ಶಾಲೆಯ ಸಾಧನೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯಾಧ್ಯಾಪಕ ವಿ.ಎಸ್.ಅವಧಾನಿ ಮಾತನಾಡಿ ಮೈಸೂರು ರಾಜಮನೆತನ ಮತ್ತು ಶಾಲೆಗೆ ಇರುವ ಸಂಬಂದವನ್ನು ನೆನಪಿಸಿದರು. 19-02-1957ರಲ್ಲಿ ಮೈಸೂರು ರಾಜ್ಯಪಾಲರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ವರು ಶಾಲೆಗೆ ಭೇಟಿ ನೀಡಿ, ಶಾಲಾ ಬೆಳ್ಳಿ ಹಬ್ಬದ ಸ್ಮಾರಕ ಕಟ್ಟಡದ ಶಿಲಾನ್ಯಾಸವನ್ನು ನೇರವೆರಿಸಿದ ಸಂದರ್ಭವನ್ನು ವಿವರಿಸಿದರು.
ವೇದಿಕೆಯಲ್ಲಿ ಉದ್ಯಮಿ ಯಶೋಧರ ನಾಯ್ಕ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಜೆ.ಟಿ.ಪೈ ಸ್ವಾಗತಿಸಿದರು. ಅಶೋಕ ನಾಯ್ಕ ವಂದಿಸಿದರು. ಎ.ಕೆ.ಭಟ್ಟ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರು, ವಿದ್ಯಾರ್ಥಿಗಳು, ಕನ್ನಡ ಅಭಿಮಾನಿ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.
Leave a Comment