ಕಾರವಾರ:
ಕರ್ನಾಟಕ ಜರ್ನಲಿಸ್ಟ್ ಯುನಿಯನ್ ನೀಡಿದ ಹರ್ಮನ್ ಮೊಗ್ಲಿಂಗ್ ಪ್ರಶಸ್ತಿ ಸ್ವೀಕರಿಸಿ ವಿಜಯಲಕ್ಷ್ಮಿ ಶಿಬರೂರು ಅವರು ಅಭಿಪ್ರಾಯ ಹಂಚಿಕೊಂಡರು.ಪತ್ರಿಕೋದ್ಯಮ ಎಂಬುದು ಜನಪರ ಸತ್ಯದ ಹೋರಾಟವಾಗಿದ್ದು, ಸತ್ಯದವ್ನು ಮರೆಮಾಚದೇ ವರದಿ ಮಾಡುವ ಉತ್ಸಾಹ ವರದಿಗಾರರಲ್ಲಿರಬೇಕು ಎಂದು ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ಹೇಳಿದರು,ಮಾದ್ಯಮ ಕ್ಷೇತ್ರದಲ್ಲಿರುವವರು ಸ್ವಂತ ಬದುಕಿಗಿಂತಲೂ ತ್ಯಾಗದ ಮನೋಭಾವನೆಯನ್ನು ಹೊಂದಿರಬೇಕಾಗುತ್ತದೆ ಎಂದು ಹೇಳಿದರು. ಸದ್ಯದ ಪರಿಸ್ಥಿತಿಯಲ್ಲಿ ಪ್ರಾಮಾಣಿಕತೆ ಎಂಬುದನ್ನೇ ಜನ ಅನುಮಾನದಿಂದ ನೋಡುವಂತಾಗಿದೆ. ಎಲ್ಲಾ ಕಡೆ ಎಲ್ಲಾ ರಂಗಗಳಲ್ಲಿ ಭ್ರಷ್ಟಾಚಾರ ತುಂಬಿದ್ದು, ಮಾದ್ಯಮಗಳು ಇದರಿಂದ ಹೊರತಾಗಿಲ್ಲ. ಇದನ್ನು ತಪ್ಪಿಸಲು ಮಾದ್ಯಮಗಳು ಬಂಡವಾಳ ಶಾಹಿ ಮತ್ತು ರಾಜಕೀಯ ಪಕ್ಷಗಳ ಹಿಡಿತದಿಂದ ಹೊರ ಬರಬೇಕು ಎಂದು ಅಭಿಪ್ರಾಯ ಪಟ್ಟರು. ಈ ವೇಳೆ ಸಭಿಕರೊಂದಿಗೆ ಸಂವಾದ ನಡೆಸಿದರು. ಕಸಾಪ ಅಧ್ಯಕ್ಷ ನಾಗರಾಜ್ ಹರಪನಹಳ್ಳಿ ಪತ್ರಿಕೋದ್ಯಮದ ಇತಿಹಾಸ ಮತ್ತು ಇಂದಿನ ಪತ್ರಿಕೋದ್ಯಮದ ಸ್ಥಿತಿಗತಿ ಕುರಿತು ಉಪನ್ಯಾಸ ನೀಡಿದರು.
ಕುಮಟಾ ಶಾಸಕಿ ಶಾರದಾ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಉದ್ಯಮಿ ರೂಪಾಲಿ ನಾಯ್ಕ,ಪ್ರಮುಖರಾದ ಶಿವಾನಂದ ನಾಯಕ ಸಾಮಾಜಿಕ ಕಾರ್ಯಕರ್ತೆ ಅನು ಕಳಸ, , ವಿನಾಯಕ ಗಂಗೊಳ್ಳಿ ಇದ್ದರು. ಜರ್ನಲಿಸ್ಟ್ ಯುನಿಯನ್ ಅಧ್ಯಕ್ಷ ಕಡತೋಕ ಮಂಜು ಪ್ರಸ್ತಾಪಿಸಿದರು. ಪ್ರವೀಣ್ ಹೆಗಡೆ ವಂದಿಸಿದರು. ಗಿರೀಶ್ ನಾಯ್ಕ ಸ್ವಾಗತಿಸಿದರು.
Leave a Comment