ಹೊನ್ನಾವರ :
ಇಲ್ಲಿನ ಬಸ್ನಿಲ್ದಾಣ ಅವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಪ್ರಯಾಣಿಕರು ಪ್ರತಿಭಟನೆ ನಡೆಸಿದರು.
ಪಟ್ಟಣದ ಬಸ್ನಿಲ್ದಾಣದಲ್ಲಿ ಸಂಜೆ 7:30 ಆದರೂ ದೀಪ ಬೆಳಗುವುದಿಲ್ಲ ಎಂದು ಪ್ರಯಾಣಿಕರು ಕಂಟ್ರೂರ್ ಬಳಿ ಪ್ರಶ್ನಿಸಿದಾಗ ಆಗ ಬಡಪ್ರಯಾಣಿಕರಿಗೆ ಹಿಗ್ಗಾಮುಗ್ಗಾ ಬೈದು ಬೆದರಿಕೆ ಹಾಕಿದ ಘಟನೆ ಹೊನ್ನಾವರ ಬಸ್ನಿಲ್ದಾಣದಲ್ಲಿ ನಡೆದಿದೆ.
ರಾತ್ರಿ 7:30ಕ್ಕೆ ಸುಮಾರಿಗೆ ಬಸ್ನಿಲ್ದಾಣದ ಮುಖ್ಯದ್ವಾರದಲ್ಲಿ ಲೈಟ್ ಹಾಕಲಿಲ್ಲವೆಂದು ಸಾರ್ವಜನಿಕರು ಹಾಗೂ ಪ್ರಯಾಣಿಕರು ಕಂಟ್ರೂರ್ನಲ್ಲಿ ವಿಚಾರಿಸಿದಾಗ ಕಂಟ್ರೋಲರ್ ಆದ ಹೆಚ್.ಎಸ್.ಮಡಿವಾಳ(ಬ್ಯಾಚ್ ನಂ.1081) ಆದ ಆ ಬಡಪ್ರಯಾಣಿಕರಿಗೆ ಲೈಟ್ ಹಾಕುವುದು ಬಿಡುವುದು ನಮ್ಮ ಇಷ್ಟ ಅದನ್ನು ಕೇಳುವುದು ನೀನ್ಯಾರು ಎಂದು ಗದರಿಸಿದ್ದಾನೆ. ನಂತರ ಅಲ್ಲಿ ರಂಗ ಪ್ರವೇಶ ಮಾಡಿದ ಕರ್ತವ್ಯದ ಮೇಲೆ ಇದ್ದ ಕೃಷ್ಣ ಲಿಂಗಪ್ಪ ನಾಯ್ಕ (ಬ್ಯಾಚ್ ನಂ.1111) ಎಂಬ ನಿರ್ವಾಹಕ ಸೇರಿದ ಎಲ್ಲರೂ ಪ್ರಯಾಣಿಕರ ಹಾಗೂ ಸಾರ್ವಜನಿಕರಿಗೆ ಅದೇ ರೀತಿಯ ಅಸಡ್ಡೆಯ ಉತ್ತರ ನೀಡಿ ನಾನು ಡ್ಯೂಟಿ ಮೇಲಿದ್ದೇ ನನನ್ನು ಎನೂ ಮಾಡಲಾಗುವುದಿಲ್ಲ ಎಂದು ಗದರಿಸಿದನು. ಇನ್ನೊಬ್ಬ ಕಂಟ್ರೋಲರ್ ಮೋಹನ ನಾಯ್ಕ (ಬ್ಯಾಚ್ ನಂ.1101) ಇವನ ಹತ್ತಿರ ಪ್ರಯಾಣಿಕರು ಹಾಗೂ ಅಂಗವಿಕಲರು ಬಸ್ ಕೇಳಲು ಹೋದರೆ ಪ್ರಯಾಣಿಕರನ್ನು ಹಾಗೂ ಅಂಗವಿಕಲರನ್ನು ಕೆಟ್ಟ ಶಬ್ದದಿಂದ ಬೈದು ಹಾಗೂ ಹೊಡೆಯಲು ಹೋಗುತ್ತಾನೆ. ಖಾಕಿ ಬಟ್ಟೆ ಧರಿಸಿ ಕರ್ತವ್ಯ ನಿರ್ವಹಿಸುವವರೇ ಈ ರೀತಿ ವರ್ತಿಸಿದರೆ ಪ್ರಯಾಣಿಕರ ಸ್ಥಿತಿ ಏನಾಗಬೇಕು? ಹಾಗೂ ಈ ಮೂವರು ಸೇರಿ ಕಂಟ್ರೋಲ್ ರೂಮ್ನಲ್ಲಿ ಮಧ್ಯಪಾನ ಮಾಡುತ್ತಿರುವುದನ್ನು ಗಮನಿಸಿದ ಪ್ರಯಾಣಿಕರು ಅಧಿಕಾರಿಗಳನ್ನು ಕೇಳಲು ಹೋದರೆ ಜನರ ಮೇಲೆ ತಿರುಗಿ ಬಿದ್ದರು ನಂತರ ನೂರಾರು ಜನ ಒಟ್ಟಾಗಿ ಹೋದಾಗ ಅಲ್ಲಿ ಇದ್ದ ಕರ್ತವ್ಯದಲ್ಲಿ ಇದ್ದ ಕಂಟ್ರೋಲರ್ ಹಾಗೂ ಕಂಡೆಕ್ಟರ್ ನಾಪತ್ತೆಯಾಗಿದ್ದರು.
ರಾತ್ರಿ ಇಡೀ ನಿಯಂತ್ರಕರ ಕೊಠಡಿ ತರೆದಿರಬೇಕು. 7:30 ಕ್ಕೆ ಬಸ್ ನಿಲ್ದಾಣದಲ್ಲಿ ಎಲ್ಲ ದೀಪ ಬೆಳಗಬೇಕು ಎಂದಿದ್ದಾರೆ. ಪ್ರಯಾಣಿಕರು ಹಾಗೂ ಸಾರ್ವಜನಿಕರು ಕಂಟ್ರೋಲರ್ನನ್ನು ಹಾಗೂ ಕರ್ತವ್ಯದಲ್ಲಿರುವ ಕಂಡೆಕ್ಟರ್ನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಪ್ರತಿಭಟನೆಗೆ ಮುಂದಾದರು. ವ್ಯವಸ್ಥೆ ಸರಿಪಡಿಸದಿದ್ದರೆ ಪ್ರತಿಭಟಿಸುವುದಾಗಿ ಎಚ್ಚರಿಸಿದರು.
Leave a Comment