ಹೊನ್ನಾವರ:
ಶ್ರೀ ಮಾರಮ್ಮಾ ಯಾನೆ ದಂಡಿನ ದುರ್ಗಾದೇವಿ ದೇವಸ್ಥಾನ, ದುರ್ಗಾಕೇರಿ ಹಾಗೂ ಕೊಂಕಣ ಖಾರ್ವಿ ಸಮಾಜ ಗುರುದರ್ಶನ ಸಮಿತಿ ಆಶ್ರಯದಲ್ಲಿ ಶೃಂಗೇರಿ ಜಗದ್ಗುರು ಪೀಠದ ಮಾರ್ಗದರ್ಶನದಲ್ಲಿ ಹೊನ್ನಾವರ ತಾಲೂಕಿನ ಕೊಂಕಣಿ ಖಾರ್ವಿ ಸಮಾಜದವರು ಗುರುಪೂರ್ಣಿಮೆ ಉತ್ಸವವನ್ನು ಆಚರಿಸಿದರು.
ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರ ಹಾಗೂ ತತ್ಕರ ಕಮಲ ಸಂಜಾತ ಶ್ರೀ ಶ್ರೀ ವಿಧು ಶೇಖರ ಭಾರತೀ ಮಹಾಸ್ವಾಮಿಗಳವರ ಸಂಕಲ್ಪದಂತೆ ಧರ್ಮಾಧಿಕಾರಿ ಹೆಚ್. ವಿ, ನರಸಿಂಹಮೂರ್ತಿಗಳ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ವೇದಮೂರ್ತಿ ಪತಂಜಲಿ ವೀಣಾಕರ್ರವರು ಮಾತನಾಡಿ, ಶೃಂಗೇರಿ ಜಗದ್ಗುರು ಪೀಠ ಈಡಿ ವಿಶ್ವಕ್ಕೆ ಗುರುಸ್ಥಾನದಲ್ಲಿದೆ. ಈಡಿ ವಿಶ್ವವೇ ಶಂಕರಾಚಾರ್ಯರನ್ನು ಜಗದ್ಗುರುಗಳನ್ನಾಗಿ ಒಪ್ಪಿಕೊಂಡಿದೆ. ಶೃಂಗೇರಿ ಪೀಠವನ್ನು ತಿಳಿಸಿಕೊಟ್ಟ ಇವರು ಇಂತಹ ಮಹಾಸ್ವಾಮಿಗಳ ಮಾರ್ಗದರ್ಶನದಂತೆ ಗುರುಗಳನ್ನ ಗೌರವಿಸಿವ, ವಂದಿಸುವ ನೀವು ನಿಜಕ್ಕೂ ಧನ್ಯವಂತರು ಎಂದು ಹೇಳಿದರು.
ಇನ್ನೋರ್ವ ಅತಿಥಿಯಾಗಿ ಅಗಮಿಸಿದ ದೇವಸ್ಥಾನದ ಧರ್ಮದರ್ಶಿ ವಿ. ಹೆಚ್. ಕರ್ಕಿಕರರವರು ಮಾತನಾಡಿ ಗುರುವಿನ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನದ ಅಧ್ಯಕ್ಷ ಎ. ಎನ್ ಮೇಸ್ತರವರು ವಹಿಸಿದ್ದರು.
ಗುರುದರ್ಶನ ಸಮಿತಿಯ ಕಾರ್ಯದರ್ಶಿ ವೆಂಕಟೇಶ ಮೇಸ್ತ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು.
ಸಮಿತಿಯ ಉಪಾಧ್ಯಕ್ಷ ಉಮೇಶ ಮೇಸ್ತ, ಶಿವರಾಜ್ ಮೇಸ್ತ, ಉಮೇಶ ಸಾರಂಗ್, ವಾಸುದೇವ ಮೇಸ್ತ ಮುಂತಾದವರು ಉಪಸ್ಥಿತರಿದ್ದರು.
ಹೊನ್ನಾವರ ತಾಲೂಕಿನ ಕೊಂಕಣ ಖಾರ್ವಿ ಸಮಾಜದ ವಿವಿಧ ವಾಡೆಗಳ ಪ್ರಮುಖರು ಹಾಗೂ ಸಂಘ ಸಂಸ್ಥೆಗಳ ಪ್ರತಿ ನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗುರುವಂದನೆ ಸಲ್ಲಿಸಿದರು.
Leave a Comment