ಹೊನ್ನಾವರ :
ಜಿಲ್ಲೆಯಲ್ಲಿ ಭೂ ಗೇಣಿದಾರರ ಹಕ್ಕಿಗಾಗಿ ಅವಿರತವಾಗಿ ಹೋರಾಡಿ ಬಡ ರೈತ ಕುಟುಂಬಗಳಿಗೆ ನ್ಯಾಯ ನೀಡಿದ, ನಿರಂತರವಾಗಿ ಕಾಂಗ್ರೆಸ್ ಪಕ್ಷದಿಂದ ನಾಲ್ಕು ಬಾರಿ ಕೆನರಾ ಲೋಕಸಭಾ ಕೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದ ಕಾಂಗ್ರೇಸ್ ಪಕ್ಷದ ಹಿರಿಯ ನಾಯಕ ದೇವರಾಯ ನಾಯ್ಕ ಅವರ ನಿಧನಕ್ಕೆ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಕಂಬನಿ ಮಿಡಿದಿದ್ದಾರೆ.
ಅವರ ನಿಧನದಿಂದ ಕಾಂಗ್ರೆಸ್ ಪಕ್ಷ ಬಡವಾಗಿದ್ದು, ಒರ್ವ ಉತ್ತಮ ಶಿಸ್ತುಬದ್ದ, ಪ್ರಾಮಾಣಿಕ ನಾಯಕನನ್ನು ಪಕ್ಷ ಕಳೆದುಕೊಂಡಿದೆ ಎಂದು ಅವರು ದುಃಖಿಸಿದ್ದಾರೆ. ಮೌಲ್ಯಯುತ ರಾಜಕಾರಣ ಮಾಡಿದ್ದ ಅವರನ್ನು ಜಿಲ್ಲೆಯ ಗ್ರಾಮೀಣ ಭಾಗದ ಜನರು ಎಂದೆಂದಿಗೂ ಮರೆಯಲಾರರು. ಅವರ ನಿಧನದಿಂದ ಅವರ ಕುಟುಂಬದ ಸದಸ್ಯರಿಗೆ ದುಃಖ ಒರಿಸುವ ಶಕ್ತಿ ದೇವರು ನೀಡಲಿ ಎಂದು ಜಗದೀಪ ಎನ್. ತೆಂಗೇರಿ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ಪ್ರಾರ್ಥಿಸಿದ್ದಾರೆ.
Leave a Comment