ಕಾರವಾರ:
ಕೆನರಾ ಬ್ಯಾಂಕ್ ಕಾಲೋನಿಯ ಪದ್ಮನಾಬ ನಗರ ಐದನೇ ಅಡ್ಡರಸ್ತೆಯಲ್ಲಿರುವ ಖಾಲಿ ಜಾಗದಲ್ಲಿ ಮಳೆ ನೀರು ನಿಲ್ಲುತಿದ್ದು, ಸಾರ್ವಜನಿಕರಿಗೆ ತೊಂದರೆಯಾಗಿದೆ.
ಇಲ್ಲಿ ಮೂರು ಅಡಿಗಳಷ್ಟು ಎತ್ತರದಲ್ಲಿ ನೀರು ನಿಂತಿದೆ. ಇದರಿಂದ ಕೀಟಭಾದೆ ಹೆಚ್ಚಿದೆ. ಸುತ್ತಲಿನ ಮನೆಯೊಳಗೆ ಹಾವು ಹಾಗೂ ಇತರೆ ಕ್ರಿಮಿಕೀಟಗಳು ಸೇರಿಕೊಳ್ಳುತ್ತಿದ್ದು ಜನ ನಿತ್ಯ ತೊಂದರೆ ಅನುಭವಿಸುವಂತಾಗಿದೆ. ಸಾಂಕ್ರಾಮಿಕ ರೋಗ ಕೂಡ ಹರಡುವ ಸಾಧ್ಯತೆ ಇದ್ದು, ಇದರಿಂದ ಜನ ಆತಂಕಕ್ಕಿಡಾಗಿದ್ದಾರೆ. ಪ್ರತಿ ವರ್ಷ ಇದೇ ಸಮಸ್ಯೆ ಇದ್ದರೂ ಯಾವ ಕ್ರಮವನ್ನು ಕೈಗೊಳ್ಳಲಾಗಿಲ್ಲ. ಜಾಗದ ಮಾಲಿಕರು ಖಾಲಿ ಜಾಗದಲ್ಲಿ ನೀರು ನಿಲ್ಲದಂತೆ ತಡೆಯಬೇಕು. ಇಲ್ಲವಾದಲ್ಲಿ ಸರ್ಕಾರ ಈ ಜಾಗವನ್ನು ಮುಟ್ಟುಗೋಲು ಹಾಕಬೇಕು ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಆಗ್ರಹಿಸಿದ್ದಾರೆ.
Leave a Comment