ಕಾರವಾರ: ನಗರ ವ್ಯಾಪ್ತಿಯಲ್ಲಿದ್ದರೂ ಗುಡ್ಡಳ್ಳಿ ಗ್ರಾಮಕ್ಕೆ ಸೂಕ್ತ ರಸ್ತೆ ಸಂಪರ್ಕವಿಲ್ಲ. ಹೀಗಾಗಿ ಅಲ್ಲಿನ ಜನ ನಿತ್ಯ ಸಂಚಾರಕ್ಕೆ ತೊಂದರೆ ಅನುಭವಿಸುತ್ತಿದ್ದಾರೆ. ನಗರದಿಂದ ಸುಮಾರು 7 ಕಿ.ಮೀ. ದೂರದಲ್ಲಿ ಸಮುದ್ರ ಮಟ್ಟದಿಂದ ಸುಮಾರು 800 ಅಡಿ ಎತ್ತರದಲ್ಲಿ ಈ ಗುಡ್ಡಳ್ಳಿ ಎಂಬ ಊರು ಇದೆ. ಪ್ರಾರಂಭದಲ್ಲಿ ಗ್ರಾಪಂ ಆಡಳಿತಲ್ಲಿದ್ದ ಈ ಹಳ್ಳಿಯನ್ನು ಕಳೆದ 10 ವರ್ಷಗಳ ಹಿಂದೆ ನಗರ ವ್ಯಾಪ್ತಿಗೆ ಸೇರಿಸಲಾಗಿದೆ. ಆದರೆ ಯಾವುದೇ ಆಧುನಿಕ ಸೌಕರ್ಯಗಳನ್ನು ಕಲ್ಪಿಸಲಾಗಿಲ್ಲ. … [Read more...] about ಗುಡ್ಡಳ್ಳಿ ಗ್ರಾಮಕ್ಕೆ ಸೂಕ್ತ ರಸ್ತೆ ಸಂಪರ್ಕವಿಲ್ಲ,ಸಂಚಾರಕ್ಕೆ ತೊಂದರೆ
ತೊಂದರೆ
ವಾಣಿಜ್ಯ ಬಂದರು ವಿಸ್ತರಣೆಯಿಂದ ಮೀನುಗಾರಿಕೆಯ ಜೊತೆ ಪ್ರವಾಸೋಧ್ಯಮ ಬೆಳವಣಿಗೆಗೂ ತೊಂದರೆ; ಕೆ.ಟಿ ತಾಂಡೇಲ್
ಕಾರವಾರ: ವಾಣಿಜ್ಯ ಬಂದರು ವಿಸ್ತರಣೆಯಿಂದ ಮೀನುಗಾರಿಕೆಯ ಜೊತೆ ಪ್ರವಾಸೋಧ್ಯಮ ಬೆಳವಣಿಗೆಗೂ ತೊಂದರೆಯಾಗಲಿದೆ ಎಂದು ಮೀನುಗಾರ ಮುಖಂಡ ಕೆ.ಟಿ ತಾಂಡೇಲ್ ಹೇಳಿದರು. ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು, ವಿವಿಧ ಯೋಜನೆಗಳಿಗೆ ಕಾರವಾರದಲ್ಲಿನ ಬಹುತೇಕ ಕಡಲತೀರಗಳು ಸಾರ್ವಜನಿಕರ ಪ್ರವೇಶದಿಂದ ದೂರ ಉಳಿದಿದೆ. ಸದ್ಯ ಮಾಜಾಳಿ ಕಡಲತೀರ ಹಾಗೂ ರವೀಂದ್ರನಾಥ್ ಕಡಲತೀರಗಳಲ್ಲಿ ಮಾತ್ರ ಸಾರ್ವಜನಿಕ ಪ್ರವೇಶಕ್ಕೆ ಅವಕಾಶ ನೀಡಲಾಗಿದ್ದು, ವಾಣಿಜ್ಯ ಬಂದರು ವಿಸ್ತರಣೆ ನಡೆದಲ್ಲಿ … [Read more...] about ವಾಣಿಜ್ಯ ಬಂದರು ವಿಸ್ತರಣೆಯಿಂದ ಮೀನುಗಾರಿಕೆಯ ಜೊತೆ ಪ್ರವಾಸೋಧ್ಯಮ ಬೆಳವಣಿಗೆಗೂ ತೊಂದರೆ; ಕೆ.ಟಿ ತಾಂಡೇಲ್
ನೌಕಾನೆಲೆ ಪ್ರವೇಶ ದ್ವಾರದಲ್ಲಿ ಟ್ರಾಪಿಕ್ ಜಾಮ್;ಸಾರ್ವಜನಿಕರಿಗೆ ತೊಂದರೆ
ಕಾರವಾರ:ಅರಗಾದ ನೇವಲ್ಬೇಸ್ ಮುಂಭಾಗ ನೌಕಾದಳದ ಹೊರ ಗುತ್ತಿಗೆ ನೌಕರರು ನೂರಾರು ಖಾಸಗಿ ವಾಹನವನ್ನು ನಿಲ್ಲಿಸುತ್ತಿದ್ದು, ಇದರಿಂದ ಪ್ರತಿದಿನ ಹೆದ್ದಾರಿಯಲ್ಲಿ ಟ್ರಾಪಿಕ್ ಜಾಮ್ ಉಂಟಾಗುತ್ತಿದೆ. ಶನಿವಾರ ಬೆಳಗ್ಗೆ ನೇವಿ ಪೊಲೀಸರು ಹೊರಗೆ ನಿಲ್ಲಿಸಿಟ್ಟ ದ್ವಿಚಕ್ರ ವಾಹನವೊಂದಕ್ಕೆ ಬೀಗ ಹಾಕಿದ್ದು ಆಕ್ರೋಶಕ್ಕೆ ಕಾರಣವಾಯಿತು. ನೆವಲ್ ಬೇಸ್ನಲ್ಲಿ ಹೊರ ಗುತ್ತಿಗೆ ನೌಕರರರಾಗಿ ಸ್ಥಳಿಯರು ಹಾಗೂ ಹೊರ ಭಾಗದ ಅನೇಕ ಮಂದಿ ಕೆಲಸ ಮಾಡುತ್ತಿದ್ದು, ಎಲ್ಲರೂ ರಾಷ್ಟ್ರೀಯ … [Read more...] about ನೌಕಾನೆಲೆ ಪ್ರವೇಶ ದ್ವಾರದಲ್ಲಿ ಟ್ರಾಪಿಕ್ ಜಾಮ್;ಸಾರ್ವಜನಿಕರಿಗೆ ತೊಂದರೆ
ಎಚ್1ಎನ್1 ಮಾರಕ ಕಾಯಿಲೆ
ಕಾರವಾರ:ಜಿಲ್ಲೆಯಲ್ಲಿ ಎಚ್1ಎನ್1 ಮಾರಕ ಕಾಯಿಲೆ ಜನರನ್ನು ಭಯಭೀತರನ್ನಾಗಿಸಿದೆ. ಸೂಕ್ತ ಚಿಕಿತ್ಸೆಯ ಅಲಭ್ಯತೆ, ರೋಗ ಪತ್ತೆಗೆ ಪರೀಕ್ಷಾ ಕೇಂದ್ರವಿಲ್ಲದೆ ದೂರದ ಆಸ್ಪತ್ರೆಗಳಿಗೆ ತೆರಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ದೂರದ ರಾಜ್ಯಗಳಲ್ಲಿ ದುಡಿಯುವ ಅಥವಾ ಪ್ರವಾಸಕ್ಕೆಂದು ತೆರಳುವವರು ಜಿಲ್ಲೆಗೆ ಎಚ್1ಎನ್1 ಕಾಯಿಲೆಯನ್ನು ಹೊತ್ತು ತರುತ್ತಿದ್ದು 2017ರಲ್ಲಿ ಈವರೆಗೆ ಸುಮಾರು 22 ಪ್ರಕರಣಗಳು ಪತ್ತೆಯಾಗಿದೆ. ಅಲ್ಲದೆ 6 ಜನ ರೋಗ ಬಾಧಿತರು ಮೃತಪಟ್ಟಿದ್ದು ಜನರನ್ನು … [Read more...] about ಎಚ್1ಎನ್1 ಮಾರಕ ಕಾಯಿಲೆ
ಖಾಲಿ ಜಾಗದಲ್ಲಿ ನಿಲ್ಲುವ ಮಳೆ ನೀರು;ಸಾರ್ವಜನಿಕರಿಗೆ ತೊಂದರೆ
ಕಾರವಾರ:ಕೆನರಾ ಬ್ಯಾಂಕ್ ಕಾಲೋನಿಯ ಪದ್ಮನಾಬ ನಗರ ಐದನೇ ಅಡ್ಡರಸ್ತೆಯಲ್ಲಿರುವ ಖಾಲಿ ಜಾಗದಲ್ಲಿ ಮಳೆ ನೀರು ನಿಲ್ಲುತಿದ್ದು, ಸಾರ್ವಜನಿಕರಿಗೆ ತೊಂದರೆಯಾಗಿದೆ. ಇಲ್ಲಿ ಮೂರು ಅಡಿಗಳಷ್ಟು ಎತ್ತರದಲ್ಲಿ ನೀರು ನಿಂತಿದೆ. ಇದರಿಂದ ಕೀಟಭಾದೆ ಹೆಚ್ಚಿದೆ. ಸುತ್ತಲಿನ ಮನೆಯೊಳಗೆ ಹಾವು ಹಾಗೂ ಇತರೆ ಕ್ರಿಮಿಕೀಟಗಳು ಸೇರಿಕೊಳ್ಳುತ್ತಿದ್ದು ಜನ ನಿತ್ಯ ತೊಂದರೆ ಅನುಭವಿಸುವಂತಾಗಿದೆ. ಸಾಂಕ್ರಾಮಿಕ ರೋಗ ಕೂಡ ಹರಡುವ ಸಾಧ್ಯತೆ ಇದ್ದು, ಇದರಿಂದ ಜನ ಆತಂಕಕ್ಕಿಡಾಗಿದ್ದಾರೆ. ಪ್ರತಿ … [Read more...] about ಖಾಲಿ ಜಾಗದಲ್ಲಿ ನಿಲ್ಲುವ ಮಳೆ ನೀರು;ಸಾರ್ವಜನಿಕರಿಗೆ ತೊಂದರೆ