ಕಾರವಾರ:
ಮಲ್ಲಾಪುರದಿಂದ ಕಾರವಾರ ಸುಂಕೇರಿವರೆಗೆ ಕಾಳಿ ನದಿ ತಟದಲ್ಲಿ ಎನ್.ಪಿ.ಸಿ.ಐ.ಎಲ್ ಕೈಗಾದವರು ಪರ್ಯಾಯ ರಸ್ತೆ ನಿರ್ಮಿಸಬೇಕೆಂದು ಶಾಸಕ ಸತೀಶ ಕೆ. ಸೈಲ್ ಒತ್ತಾಯಿಸಿದ್ದಾರೆ.
ನಗರೋತ್ಥಾನ ಯೋಜನೆಯಲ್ಲಿ ಕಾಳಿ ನದಿ ದಡದಲ್ಲಿ ಕೋಡಿಬಾಗ ಅಳ್ವೆವಾಡಾದಿಂದ ಸುಂಕೇರಿವರೆಗೆ ರಸ್ತೆ ನಿರ್ಮಾಣಕ್ಕಾಗಿ 5 ಕೋಟಿ ಮೀಸಲಾಗಿಟ್ಟಿದೆ. ಮುಂದೆ ಈ ರಸ್ತೆಯು ಇದೇ ಕಾಳಿ ನದಿ ದಡದಲ್ಲಿ ಮಲ್ಲಾಪುರದವರೆಗೆ ಮುಂದುವರಿದರೆ ಸುರಕ್ಷತೆಗೆ ಪರ್ಯಾಯ ರಸ್ತೆಯ ಜೊತೆಗೆ ಪ್ರದೇಶದಲ್ಲಿ ಪ್ರವಾಸಿ ದಾಮಗಳನ್ನು ಅಭಿವೃದ್ಧಿ ಪಡಿಸಿದಂತಾಗುತ್ತದೆ ಎಂದು ಸಲಹೆ ನೀಡಿದ್ದಾರೆ.
ಕೈಗಾದ ಅಧಿಕಾರಿಗಳಿಗೆ ಪತ್ರ ಬರೆದಿರುವ ಅವರು, ಎನ್.ಪಿ.ಸಿ.ಆಯ್.ಎಲ್ ಕೈಗಾದಲ್ಲಿ 5ನೇ ಮತ್ತು 6ನೇ ಹಂತ ಸದ್ಯದಲ್ಲಿಯೇ ಕಾರ್ಯಾರಂಭಗೊಳ್ಳಲ್ಲಿದ್ದು ಯಂತ್ರೋಪಕರಣಗಳನ್ನು ಸಾಗಿಸುವುದು ಮತ್ತು ಇನ್ನಿತರ ತ್ವರಿತ ಕೆಲಸಕ್ಕಾಗಿ ಸುಸಜ್ಜಿತ ರಸ್ತೆ ಅವಶ್ಯಕತೆ ಇದೆ. ಮೇಲಾಗಿ ಎನ್.ಪಿ.ಸಿ.ಆಯ್.ಎಲ್ ಕೈಗಾ ಇವರಿಗೆ ಕಠಿಣ ಪರಿಸ್ಥಿತಿಯನ್ನು ನಿಭಾಯಿಸಲು ಪರ್ಯಾಯ ರಸ್ತೆ ಬೇಕಿದೆ. ಈಗಿರುವ ರಸ್ತೆಗಳು ಅತ್ಯಂತ ಕಿರಿದಾಗಿದ್ದು, ಇವುಗಳ ದಾರಣಾ ಶಕ್ತಿ ಕೂಡಾ ಅತ್ಯಂತ ಕಡಿಮೆ ಮಟ್ಟದಲ್ಲಿದೆ ಎಂದು ವಿವರಿಸಿದ್ದಾರೆ.
Leave a Comment