ಹಳಿಯಾಳ;
ನದಿಗೆ ಈಜಲು ತೆರಳಿದ ವಿದ್ಯಾರ್ಥಿಯೊರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಹಳಿಯಾಳ ಪಟ್ಟಣದಿಂದ 3 ಕೀಮಿ ಅಂತರದಲ್ಲಿರುವ ಕಳಸಾಪೂರ ಗ್ರಾಮದ ನದಿಯಲ್ಲಿ ಸಂಭವಿಸಿದೆ.
ಪಟ್ಟಣದ ಗಾಂಧಿಕೇರಿ ನಿವಾಸಿ ಗೌತಮ ಪರಶುರಾಮ್ ಕುರಿಯಾರ್ (20) ನೀರಿನ ಸೆಳೆತಕ್ಕೆ ಪ್ರಾಣಬಿಟ್ಟ ವಿದ್ಯಾರ್ಥಿಯಾಗಿದ್ದು ಇತ ಶನಿವಾರ ತನ್ನ ಇಬ್ಬರು ಸ್ನೇಹಿತರೊಂದಿಗೆ ಹಳ್ಳಕ್ಕೆ ಹೊಗಿದ್ದು ಸುಮಾರು ಗಂಟೆಗಳ ಕಾಲ ಈಜಿ ಕೊನೆಗೆ ದಡಕ್ಕೆ ಬರುವಾಗ ಗೌತಮ ನೀರಿನಲ್ಲಿ ಕಣ್ಮರೆಯಾಗಿದ್ದಾನೆ. ಜೊತೆಯಲ್ಲಿದ್ದ ಸ್ನೇಹಿತರು ತಮ್ಮ ಹಿಂದೆಯೇ ನೀರಿನಲ್ಲಿ ಬರುತ್ತಿದ್ದ ಸ್ನೇಹಿತ ಕಾಣಿಸದೆ ಇರುವುದನ್ನು ಅರಿತು ಗಾಬರಿಗೊಂಡು ಮನೆಯವರಿಗೆ ವಿಷಯ ತಿಳಿಸಿದಾಗ ಘಟನೆ ಬೆಳಕಿಗೆ ಬಂದಿದ್ದು ನೀರಿನಲ್ಲಿ ಕಣ್ಮರೆಯಾಗಿರುವ ಗೌತಮನ ಶೋಧಕಾರ್ಯ ನಡೆಸಲಾಗುತ್ತಿದೆ.
ಮೃತ ಯುವಕನು ಜೋಯಿಡಾದಲ್ಲಿ ಡಿಪ್ಲೋಮಾ ವ್ಯಾಸಾಂಗ ಮಾಡುತ್ತಿದ್ದನು ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಪೋಲಿಸರು ಮತ್ತು ಅಗ್ನಿಶಾಮಕ ದಳದವರು ಹಾಗೂ ಮುಳುಗು ತಜ್ಞರುಭೇಟಿ ನೀಡಿದ್ದು ಮದ್ಯಾಹ್ನದಿಂದಲೇ ಮೃತದೇಹದ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ.ಸುರಿಯುವ ಮಳೆಯಲ್ಲಿ ಮೃತದೇಹದ ಹುಡುಕಾಟಕ್ಕೆ ತೊಂದರೆಯಾಗಿದ್ದು ದುರ್ಘಟನೆಯ ವಿಷಯ ಪಟ್ಟಣದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದ್ದು ಘಟನಾ ಸ್ಥಳಕ್ಕೆ ಜನರು ತಂಡೊಪ ತಂಡವಾಗಿ ಆಗಮಿಸುತ್ತಿರುವುದು ಕಂಡು ಬರುತ್ತಿದ್ದು ಘಟನಾ ಸ್ಥಳದಲ್ಲಿ ಮೃತ ಯುವಕನ ಕುಟುಂಬದವರ ಆಕ್ರಂದನ ಮುಗಿಲು ಮಟ್ಟಿತ್ತು.
Leave a Comment