ಕಾರವಾರ:
ನಗರದ ಹೃದಯಭಾಗವಾದ ಹೂವಿನ ಚೌಕ್ ಬಳಿ ಶಿಥಿಲಗೊಂಡ ಕಟ್ಟಡವೊಂದು ಕುಸಿಯುವ ಹಂತದಲ್ಲಿದೆ. ಹೀಗಾಗಿ ಸಾರ್ವಜನಿಕರು ಭಯದಲ್ಲಿಯೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ದಶಕಗಳ ಹಿಂದೆ ನಿರ್ಮಿಸಲಾಗಿದ್ದ ಕಟ್ಟಡದಲ್ಲಿ ಈ ಹಿಂದೆ ವಾಣಿಜ್ಯ ಮಳಿಗೆಯನ್ನು ನಡೆಸಲಾಗುತ್ತಿತ್ತು. ಈಚೆಗೆ ಕಟ್ಟಡವನ್ನು ಅರ್ಧಬರ್ಧ ತೆರವು ಮಾಡಲಾಗಿದ್ದು, ಅದಕ್ಕೆ ಮೇಲ್ಚಾವಣಿ ಇಲ್ಲದ ಕಾರಣ ಮಳೆ ನೀರು ಕಟ್ಟಡದ ಗೋಡೆಯೊಳಗೆ ಸಂಗ್ರಹವಾಗುತ್ತಿದೆ. ಮೊದಲೇ ಶಿಥಿಲಗೊಂಡ ಕಟ್ಟಡದ ಗೋಡೆಯೂ ಮಳೆನೀರು ಕುಡಿದು ಇನ್ನಷ್ಟು ಮೃದುಗೊಂಡಿದೆ. ಹೀಗಾಗಿ ರಸ್ತೆ ಮೇಲೆಯೇ ಕಟ್ಟಡ ಕುಸಿಯುವ ಆತಂಕ ಎದುರಾಗಿದೆ. ಇನ್ನು ಈ ಕಟ್ಟಡದ ಕೆಳಗೆ ಹೂ ಹಾಗೂ ಇನ್ನಿತರ ಬೀದಿ ವ್ಯಾಪಾರಿಗಳು ದಿನವಿಡಿ ಕುಳಿತಿರುತ್ತಾರೆ. ಸಾರ್ವಜನಿಕರು ಕೂಡ ಹೆಚ್ಚಾಗಿ ಓಡಾಡುತ್ತಿದ್ದು, ಅಪಾಯ ಸಂಭವಿಸುವ ಮುನ್ನ ಕಟ್ಟಡ ತೆರವುಗೊಳಿಸಬೇಕು ಎಂದು ಸ್ಥಳೀಯರಾದ ಮಂಗೇಶ್ ವಾಗ್ ಆಗ್ರಹಿಸಿದ್ದಾರೆ.
Leave a Comment