ಕಾರವಾರ:
ತೆರಿಗೆ ಪದ್ದತಿ ಇನ್ನಷ್ಟು ಸರಳವಾಗುವದರ ಮೂಲಕ ಹೆಚ್ಚಿನ ಜನರನ್ನು ತಲುಪುವಂತಾಗಬೇಕು ಎಂದು ಸಹ್ಯಾದ್ರಿ ಗೇರು ಸಂಸ್ಕರಣೆ ಉದ್ಯಮಿ ಮುರಳಿಧರ ಪ್ರಭು ಹೇಳಿದರು.
ನಗರದ ಆದಾಯ ತೆರಿಗೆ ಕಚೇರಿಯಲ್ಲಿ ನಡೆದ ತೆರಿಗೆ ದಿನಾಚರಣೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಕ್ಲಿಷ್ಟಕರ ಕಾನೂನು ಹಾಗೂ ಹೆಚ್ಚಿನ ತೆರಿಗೆಯಿಂದಾಗಿ ಪ್ರಾಮಾಣಿಕರೂ ಅಡ್ಡದಾರಿ ಹಿಡಿಯುವಂತಾಗಿದೆ. ತೆರಿಗೆ ಸುದಾರಣಾ ನೀತಿಗಳು ಅನುಷ್ಠಾನಗೊಂಡಲ್ಲಿ ಎಲ್ಲರೂ ಸ್ವಯಂ ಪ್ರೇರಿತರಾಗಿ ಸರಿಯಾದ ತೆರಿಗೆ ಪಾವತಿಸುತ್ತಾರೆ ಎಂದರು. ತೆರಿಗೆ ಸಲಹೆಗಾರ ಅತುಲ ಅಣ್ವೇಕರ್ ಮಾತನಾಡಿ ತೆರಿಗೆ ಇಲಾಖೆಯಲ್ಲಿ ಈಚಿನ ಬದಲಾವಣೆಗಳ ಕುರಿತು ಮಾಹಿತಿ ನೀಡಿದರು. ಕಾರ್ಯನಿರತ ಚಾರ್ಟೆಟ್ ಅಕೋಂಟ್ಗಳು, ತೆರಿಗೆ ಸಲಹೆಗಾರರು, ಇಲಾಖೆ ನಿವೃತ್ತ ಅಧಿಕಾರಿಗಳು ಕಾರ್ಯಕ್ರಮದಲ್ಲಿದ್ದರು. ಆದಾಯ ತೆರಿಗೆ ಇಲಾಖೆಯ ನಂದನ ಐಗಳ ಸ್ವಾಗತಿಸಿದರು. ಪರಮೇಶ್ವರ ಎಂ ವಂದಿಸಿದರು.
Leave a Comment