ಹೊನ್ನಾವರ:
ಕೈ-ಕಾಲು ತೊಳೆಯಲು ಹೋದ ಯುವಕನೊಬ್ಬ ಚೀರೆಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ತಾಲೂಕಿನ ಕಡತೋಕಾ ಗ್ರಾ.ಪಂ ವ್ಯಾಪ್ತಿಯ ಜಡ್ಡಿಗದ್ದೆ ಕ್ರಾಸ್ ಬಳಿ ನಡೆದಿದೆ.
ಕಡತೋಕಾ ಜಡ್ಡಿಗದ್ದೆ ನಿವಾಸಿ ಶಶಿಧರ ಕೃಷ್ಣಮೂರ್ತಿ ಹೂಗಾರ (20) ಮೃತ ಯುವಕ. ಈತನು ಅಲ್ಲಿಯ ಸಮೀಪದ ಕಡತೋಕಾದ ನಾಗಚೌಡೇಶ್ವರಿ ದೇವಾಲಯಕ್ಕೆ ಹೋಗುವ ಪೂರ್ವದಲ್ಲಿ ಕೆರೆಯೆಂದು ಭಾವಿಸಿ ಕಾಲು ತೊಳೆಯಲು ಹೋಗಿದ್ದನು. ಚೀರೆಕಲ್ಲು ಗಣಿಗಾರಿಕೆ ನಡೆಸಿದ ಮಾಲೀಕರು ಬೇಕಾಬಿಟ್ಟಿ ಹೊಂಡ ತೆಗೆದಿದ್ದನ್ನು ಗಮನಿಸದ ಶಶಿಧರ ಆಕಸ್ಮಿಕವಾಗಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಮೃತನ ಸಹೋದರ ಮಣಿಕಂಠ ಹೂಗಾರ ಹೊನ್ನಾವರ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Leave a Comment