ಕಾರವಾರ: ಮೂರು ತಿಂಗಳ ನಂತರ ಹಲವು ಯಾಂತ್ರಿಕೃತ ಬೋಟ್ಗಳು ಮಂಗಳವಾರ ಮತ್ಸ್ಯಭೇಟೆಗಾಗಿ ಸಮುದ್ರಕ್ಕಿಳಿದಿದ್ದು, ಮೊದಲ ದಿನ ಮೀನುಭೇಟೆಯೂ ನಡೆದಿದೆ.
ಮತ್ಸ್ಯ ಸಂತತಿ ಕಾಲವಾಗಿದ್ದರಿಂದ ಜಿಲ್ಲಾಡಳಿತವೂ ತಿಂಗಳುಗಳ ಕಾಲ ಯಾಂತ್ರಿಕೃತ ಮೀನುಗಾರಿಕೆ ನಿಷೇಧಿಸಿತ್ತು. ಇದರಿಂದ ಬೋಟ್ಗಳು ಬೈತಖೋಲ್ ಬಂದರಿನಲ್ಲಿ ಲಂಗರು ಹಾಕಿದ್ದವು. ಅಗಷ್ಟ 1ರಂದು ನಿಷೇಧ ತೆರವಾಗುವದರ ಹಿನ್ನಲೆಯಲ್ಲಿ ಬೋಟ್ಗಳನ್ನು ಅಲಂಗರಿಸಿ ಪೂಜಿಸಲಾಗಿತ್ತು. ಲಂಗರು ಹಾಕಿದ್ದ ವೇಳೆ ಬೋಟ್ಗಳಿಗೆ ಬಣ್ಣ ಬಡೆಯುವ ಕೆಲಸ ನಡೆಸಿದ್ದ ಮೀನುಗಾರರು, ಅಗಷ್ಟ ಆರಂಭವಾಗುತ್ತಲೇ ಮತ್ಸ್ಯಭೇಟೆ ನಡೆಸಿದರು. ಮಂಗಳವಾರ ಆಳ ಸಮುದ್ರಕ್ಕೆ ತೆರಳಿ ಮೀನುಗಾರಿಕೆ ನಡೆಸಿದ ಹಲವರಿಗೆ ಭರ್ಜರಿ ಮೀನುಗಳು ದೊರೆತಿವೆ. ಹಲವು ದಿನಗಳಿಂದ ಮೀನುಗಾರಿಕೆ ನಡೆಯದ ಕಾರಣ ಉಬ್ಬಿದ್ದ ಮೀನುಗಳು ಬೆಲೆಗೆ ಬಿದ್ದಿವೆ.
Leave a Comment