ಕಾರವಾರ: ಮುಂಬರುವ ಆಮ್ಗೇಲೆ ಪೆಸ್ತ್ ಮತ್ತು ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣೇಶ ಚತುರ್ಥಿ ಹಬ್ಬವನ್ನು ವಿಜೃಂಭಣೆ ಯಿಂದ ಆಚರಿಸಲು ಆಕಾಶವಾಣಿ ರಿಕ್ರಿಯೇಷನ್ ಕ್ಲಬ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಆಕಾಶವಾಣಿ ನಿಯದ ಮುಖ್ಯಸ್ಥ ಎಚ್.ಬಿ.ರಾಮಡಗಿ ಮಾತನಾಡಿ, ನಿಲಯದಲ್ಲಿ ಆಚರಿಸಲಾಗುವ ಸ್ವಾತಂತ್ರ್ಯೋತ್ಸವ, ಗಣೇಶ ಚತುರ್ಥಿ ಹಬ್ಬ ಮುಂತಾದ ಎಲ್ಲ ಕಾರ್ಯಕ್ರಮಗಳಿಗೆ ಸಿಬ್ಬಂದಿ ಹಾಗೂ ತಾತ್ಕಾಲಿಕ ಉದ್ಘೋಷಕರು ಕಡ್ಡಾಯವಾಗಿ ಹಾಜರಿದ್ದು ಉತ್ಸಾಹದಿಂದ ಭಾಗವಹಿಸಬೇಕು ಎಂದರು.
ಕಾರ್ಯಕ್ರಮ ನಿರ್ವಾಹಕಿ ಫೆÇ್ಲೀರಿನ್ ರೋಶ್ ಮಾತನಾಡಿ, ನಿಲಯದಲ್ಲಿ ಮೊದಲ ಬಾರಿಗೆ ಅಗಸ್ಟ್ 13 ರಂದು ಬೆಳಗ್ಗೆ 10.30 ಗಂಟೆಗೆ ಆಮ್ಗೇಲೆ ಪೆಸ್ತ್ ಎನ್ನುವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಆಹಾರ, ಉಡುಗೆ, ತೊಡುಗೆ ಸಂಸ್ಕøತಿಯನ್ನು ಪರಿಚಯಿಸಲಾಗುತ್ತದೆ. ಎಲ್ಲರೂ ಪಾಲ್ಗೊಂಡು ಸಹಕರಿಸಬೇಕು ಎಂದರು.
U Àಣೇಶ ಉತ್ಸವ ಸಮಿತಿ ಉಸ್ತುವಾರಿ ಶ್ಯಾಮ್ ಕದಂ ಮಾತನಾಡಿ, ಗಣೇಶ ಚತುರ್ಥಿಯನ್ನು ಈ ಬಾರಿ 5 ದಿನಗಳವರೆಗೆ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದರು. ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಧ್ವಜ ಕಂಬದ ಸುತ್ತ ಹಾಗೂ ಆವರಣದೊಳಗೆ ಸ್ವಚ್ಛತೆ ಕಾರ್ಯವನ್ನು ಕೈಗೊಳ್ಳಲಾಯಿತು.
ತಾಂತ್ರಿಕ ವಿಭಾಗದ ಮುಖ್ಯಸ್ಥ ಕೃಷ್ಣ ಹೆಗಡೆ, ಉದ್ಘೋಷಕಿ ಅನ್ನಪೂರ್ಣ ಹೂಗಾರ್, ರಾಜೇಶ್, ದಯಾನಂದ ಮೇತ್ರಿ, ಹರೀಶ್, ಪ್ರಸಾದ್, ತಾತ್ಕಾಲಿಕ ಉದ್ಘೋಷಕರಾದ ಸುಮಂಗಲ್ ನಾಯಕ, ದೀಪಕ್ಕುಮಾರ್, ಕೃಷ್ಣಾನಂದ ನಾಯ್ಕ, ಸಂಧ್ಯಾ ಮಂಗೇಶ್ಕರ್, ಉದಯಭಟ್ಟ , ಗಜಾ ಸೂರಂಗೆಕರ್ ಇತರರಿದ್ದರು.
Leave a Comment