ಕಾರವಾರ: ಜಿಲ್ಲಾ ಕಾನೂನು ಸೇವೆಗಳ ಪ್ರಾದಿಕಾರ ಹಾಗೂ ವಕೀಲರ ಸಂಘದ ವತಿಯಿಂದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ತಂಬಾಕು ಉತ್ಪನ್ನ ಗಳ ನಿಷೇಧ ಹಾಗೂ ರ್ಯಾಗಿಂಗ್ ಪಿಡುಗು ನಿವಾರಣೆ ಅರಿವು ಕಾರ್ಯಕ್ರಮ ನಡೆಯಿತು.
ಹಿರಿಯ ಸಿವಿಲ್ ನ್ಯಾಯಾಧೀಶ ಟಿ ಗೋವಿಂದಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಲ್ಲಿ ಯಾವದೇ ಆಸೆ ಆಮೀಷಗಳಿಗೆ ಬಲಿಯಾಗದೇ ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು. ವಕೀಲರ ಸಂಘದ ಉದಯ ನಾಯ್ಕ, ಪ್ರಾದ್ಯಾಪಕ ಉಲ್ಲಾಸ ಶಟ್ಟಿ, ನ್ಯಾಯವಾದಿ ಸಂದ್ಯಾ ತಳ್ಳೇಕರ್, ಆರ್.ಎಸ್. ಹೆಗಡೆ ಗಾಳಿ ಉಪನ್ಯಾಸ ನೀಡಿದರು. ಪ್ರಾದ್ಯಾಪಕ ವೆಂಕಟ ಗಿರಿ ಅಧ್ಯಕ್ಷತೆ ವಹಿಸಿದ್ದರು.
ಕಾವ್ಯಶ್ರಿ ಗುನಗಾ ಸ್ವಾಗತ ಗೀತೆ ಹಾಡಿದರು. ಆಯ್.ಕೆ ನಾಯ್ಕ ನಿರ್ವಹಿಸಿದರು. ಪದ್ಮರಾಜ ನಾಯ್ಕ ವಂದಿಸಿದರು.
Leave a Comment