ಕಾರವಾರ: ನೂರಾರು ಮೀನುಗಾರ ಮಹಿಳೆಯರು ಭಾನುವಾರ ಏಕಕಾಲಕ್ಕೆ ಸಮುದ್ರ ಪೂಜೆ ನಡೆಸಿದರು.
ಸಂಪ್ರದಾಯದಂತೆ ಸೂರ್ಯೋದಯ ನಗರದಲ್ಲಿನ ಗಣಪತಿ ದೇವಸ್ಥಾನದಲ್ಲಿ ಸಾಮೂಹಿಕವಾಗಿ ವಿಶೇಷ ಪೂಜೆ ಸಲ್ಲಿಸಿದ ಮಹಿಳೆಯರು ನಂತರ ಸಮುದ್ರ ಪೂಜೆಗೆ ಆಗಮಿಸಿದರು. ಕಳಸದಲ್ಲಿ ಹೊತ್ತು ತಂದಿದ್ದ ತೆಂಗಿನ ಕಾಯಿ ಹಾಗೂ ನೀರನ್ನು ಕಡಲಿಗೆ ಅರ್ಪಿಸಿದರು. ಶ್ರಾವಣ ಮಾಸದ ನಾಗ ಪಂಚಮಿಯಂದು ಸಮುದ್ರದ ಉಪ್ಪು ನೀರು ಹಾಗೂ ಬಾವಿಯ ಸಿಹಿ ನೀರನ್ನು ಕಳಸದಲ್ಲಿ ತುಂಬಿ ವೃತ ಮಾಡಲಾಗುತ್ತದೆ. ಹದಿನೈದು ದಿನದ ಬಳಿಕ ಬರುವ ನೂಲು ಹುಣ್ಣಿಮೆಯಂದು ಕಡಲ ತೀರದಲ್ಲಿ ಸಮುದ್ರರಾಜನಿಗೆ ಪೂಜೆ ಸಲ್ಲಿಸುವ ಸಂಪ್ರದಾಯ ಮೀನುಗಾರರಲ್ಲಿದೆ. ಮೀನುಗಾರಿಕೆಗೆ ತೆರಳಿದ ವೇಳೆ ಯಾವದೇ ಅನಾಹುತ ನಡೆಯದಿರಲಿ ಎಂದು ಬೇಡಿಕೊಳ್ಳುವದು ಇಲ್ಲಿನ ವಾಡಿಕೆ. ಇದರೊಂದಿಗೆ ಮತ್ಸ್ಯ ಸಂಪತ್ತು ವೃದ್ದಿಸಲಿ ಎಂದು ಬೇಡಿಕೊಳ್ಳಲಾಗುತ್ತದೆ. ಸಮುದ್ರಕ್ಕೆ ಆರತಿ ಬೆಳಗಿ, ಕಳಸವನ್ನು ಅರ್ಪಿಸಲಾಗುತ್ತದೆ.
Leave a Comment