ಹೊನ್ನಾವರ :
ಹೆಲ್ಮೆಟ್ ಧರಿಸಿ ಬೈಕ್ ಮೇಲೆ ಬಂದ ಆಗುಂತಕರೀರ್ವರು ಹಾಡು ಹಗಲೇ ಅಂಗಡಿಯಲ್ಲಿ ಕುಳಿತಿದ್ದ ಮಹಿಳೆಯೋರ್ವಳ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾದ ಘಟನೆ ಹೊನ್ನಾವರ ತಾಲೂಕಿನ ಕರ್ಕಿ ರಾಮೇಶ್ವರಕಂಬಿಯಲ್ಲಿ ಸಂಭವಿಸಿದೆ.
ಚಿನ್ನದ ಸರ ಅಪಹರಣಕ್ಕೆ ಒಳಗಾದ ಅಂಗಡಿಯ ಮಾಲಕಿ ಲಲಿತಾ ದತ್ತಾತ್ರೇಯ ಕಾಳನ್ ಈ ಕುರಿತು ಪೋಲಿಸರಿಗೆ ದೂರು ನೀಡಿರುವುದಾಗಿ ಹೇಳಿದ್ದಾಳೆ. ರಾಮೇಶ್ವರಕಂಬಿ ಮಾರ್ಗದಲ್ಲಿದ್ದ ತಮ್ಮ ಚಿಕ್ಕ ಕಿರಾಣಿ ಅಂಗಡಿಯಲ್ಲಿ ವ್ಯಾಪಾರಕ್ಕಾಗಿ ಕುಳಿತುಕೊಂಡಿದ್ದ ವೇಳೆ ಒಂದು ಬೈಕ್ ಮೇಲೆ ಹೆಲ್ಮೆಟ್ ಧರಿಸಿಕೊಂಡು ಬಂದ ಈರ್ವರಲ್ಲಿ ಓರ್ವ ತಮ್ಮ ಬಳಿ ಬಂದು ಮಾತನಾಡುವ ನೆಪದಲ್ಲಿ ತನ್ನ ಕತ್ತಿನಲ್ಲಿದ್ದ ಮೂರುವರೆ ತೊಲೆ ಪ್ರಮಾಣದ ಚಿನ್ನದ ಕರಿಮಣಿ ಸರವನ್ನು ಕಿತ್ತುಕೊಂಡು ಬೈಕ್ ಏರಿ ಪರಾರಿಯಗಿರುವುದಾಗಿ ಈ ಘಟನೆ ಕುರಿತು ಮಾಹಿತಿ ನೀಡಿದ್ದಾಳೆ. ಪೋಲಿಸರು ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
Leave a Comment