ಕಾರವಾರ: ರಾಜ್ಯ ಮೀನುಗಾರಿಕೆ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಹೊಸದಾಗಿ ಪುನರ ರಚನೆಯಾದ ಮೀನುಗಾರರ ಸಂಕಸ್ಟ ಪರಿಹಾರ ನಿಧಿ ಸಮಿತಿ ಸಭೆಯಲ್ಲಿ ಈ ಹಿಂದೆ ಮೀನುಗಾರರಿಗೆ ನೀಡಲಾಗುತ್ತಿದ್ದ ಪರಿಹಾರ ಮೊತ್ತವನ್ನು ಪರಿಸ್ಕರಿಸಲು ನಿರ್ದರಿಸಲಾಗಿದೆ.
ಮೀನುಗಾರರ ಆಕಸ್ಮಿಕ ಮರಣ ಪ್ರಕರಣಗಳಿಗೆ ನೀಡುತ್ತಿರುವ ಪರಿಹಾರ ಮೊತ್ತವನ್ನು 2 ಲಕ್ಷ ರೂ. ನಿಂದ 3 ಲಕ್ಷ ರೂ. ವರೆಗೆ, ಸಮುದ್ರದಲ್ಲಿ ಮೀನು ಹಿಡಿಯುವ ಸಂದರ್ಭ ಮರಣ ಹೊಂದಿದ ಪ್ರಕರಣಗಳಿಗೆ ನೀಡುವ ಪರಿಹಾರ 5 ಲಕ್ಷ ರೂ ವನ್ನು 6 ಲಕ್ಷಗಳಿಗೆ, ಬಲೆ ಮತ್ತು ಆಸ್ತಿ ಹಾನಿ, ದೋಣಿ ಹಾನಿ ಪ್ರಕರಣಗಳು ಹಾಗೂ ವೈದ್ಯಕೀಯ ವೆಚ್ಚಕ್ಕೆ ಸಂಬಂಧಿಸಿದಂತೆ 50 ಸಾವಿರದಿಂದ 1 ಲಕ್ಷಕ್ಕೆ, ವಿಮೆ ಪರಿಹಾರ ಪಡೆಯದ ಪ್ರಕರಣಗಳಿಗೆ 80 ಸಾವಿರದಿಂದ 1.20 ಲಕ್ಷಕ್ಕೆ ಏರಿಸಲು ತಿರ್ಮಾನಿಸಲಾಗಿದೆ. ಸಮುದ್ರದಲ್ಲಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ಪ್ರಾಣ ರಕ್ಷಣೆ ಮಾಡಿದ ರಕ್ಷಣೆ ಮಾಡಿದ ಮೀನುಗಾರರಿಗೆ ಹಾಗೂ ದೋಣಿಯ ತಾಂಡೇಲರಿಗೆ ಶೌರ್ಯ ಪ್ರಶಸ್ತಿಯ ಜೋತೆಗೆ 50 ಸಾವಿರ ಪುರಸ್ಕಾರ ನೀಡಿ ಗೌರವಿಸಲು ಸಭೆಯಲ್ಲಿ ತಿರ್ಮಾನಿಸಲಾಗಿದೆ.
ಅದೇ ರೀತಿ ಯಾಂತ್ರೀಕೃತ ದೋಣಿ ಮಾಲಿಕರು ಪಡೆಯುತ್ತಿರುವ ಡೀಸೆಲ್ ಮೇಲಿ9ನ ಮಾರಾಟ ಕರ ಮರುಪಾವತಿ ಸಹಾಯಧನದಲ್ಲಿ 1.5% ಬದಲಿಗೆ 1% ಮೊತ್ತವನ್ನು ಮಾತ್ರ ಸಂಕಷ್ಟ ಪರಿಹಾರ ನಿದಿಗೆ ಪಾವತಿಸಲು ಸಭೆಯಲ್ಲಿ ತಿರ್ಮಾನಿಸಲಾಗಿದೆ ಎಂದು ಕಾರವಾರ ಮೀನುಗಾರಿಕೆ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
Leave a Comment