ಹೊನ್ನಾವರ:
ಪಟ್ಟಣದ ಪ್ರಭಾತನಗರದ ಸೇಂಟ್ ಇಗ್ನೇಶಿಯಸ್ ಆಸ್ಪತ್ರೆಯ ಹತ್ತಿರ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಶಾಸಕರ ಅನುದಾನದಡಿಯಲ್ಲಿ ಕಾಲು ಸಂಕ ನಿರ್ಮಾಣ ಕಾಮಗಾರಿಗೆ ಪ್ರಾಧಿಕಾರದ ಅಧ್ಯಕ್ಷೆ ಶಾರದಾ ಶೆಟ್ಟಿ ಸೋಮವಾರ ಗುದ್ದಲಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು ಶೀಥಿಲಾವಸ್ಥೆಯಲ್ಲಿದ್ದ ಕಾಲುಸಂಕ ಕುಸಿಯುವ ಭೀತಿಯಲ್ಲಿತ್ತು ಇದನ್ನು ಸ್ಥಳಿಯರು ನನ್ನ ಗಮನಕ್ಕೆ ತಂದಿದ್ದರು. ಈ ಹಿಂದೆ ಸ್ಥಳಕ್ಕೆ ಭೇಟಿ ನೀಡಿ ಕಾಲುಸಂಕವನ್ನು ಪರಿಶೀಲಿಸಿದ್ದೆ. ನೂತನ ಕಾಲುಸಂಕಕ್ಕೆ ಪ್ರಾಧಿಕಾರದಿಂದ 5 ಲಕ್ಷ ರೂ. ಹಾಗೂ ಶಾಸಕರ ಅನುದಾನದಿಂದ 3 ಲಕ್ಷ ರೂ. ಅನುದಾನವನ್ನು ಒದಗಿಸಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಪ.ಪಂ.ಜೈನಾಬಿ ಇಸ್ಮಾಯಿಲ್ ಸಾಬ್, ಸುರೇಶ ಮೇಸ್ತ, ಹುಸೇನ ಖಾದ್ರಿ, ಎ.ಜಿ.ನಾಯ್ಕ, ಮಂಜುನಾಥ ಖಾರ್ವಿ, ವಿನಾಯಕ ಶೇಟ್, ಗುತ್ತಿಗೆದಾರ ರಾಜೇಶ ಮೇಸ್ತ ಇತರರು ಇದ್ದರು.
Leave a Comment