ಕಾರವಾರ:
ಜಿಲ್ಲೆಯನ್ನು ಲಾಟರಿ ಮುಕ್ತ ವಲಯನ್ನಾಗಿಸುವ ನಿಟ್ಟಿನಲ್ಲಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ, ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು (ಜಾರಿ) ಶಿರಸಿ ಮತ್ತು ಸಹಾಯಕ ನಿರ್ದೇಶಕರು, ಪಿಂಚಣಿ ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆ (ಉ.ಕ) ಕಾರವಾರ ಸದ್ಯಸರನ್ನೊಳಗೊಂಡು, ಜಿಲಾಧಿಕಾರಿ ಅಧ್ಯಕ್ಷತೆಯಲ್ಲಿ ಲಾಟರಿ ಹಾವಳಿ ನಿಯಂತ್ರಣ ಪ್ಲೈಯಿಂಗ್ ಸ್ಕ್ವಾಡ್ ರಚಿಸಲಾಗಿದೆ.
ಜಿಲ್ಲೆಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ, ಬಹುಮಾನ ಯೋಜನೆ ಹೆಸರಿನಲ್ಲಿ, ಹಬ್ಬ-ಉತ್ಸವ ಕಾರ್ಯಕ್ರಮದ ಹೆಸರಿನಲ್ಲಿ, ಲಾಟರಿಯನ್ನು ಮುದ್ರಿಸುವುದು, ಮಾರಾಟ ಮಾಡುವುದು ಹಾಗೂ ಖರೀದಿಸುವುದು ಅಪರಾಧವಾಗಿರುತ್ತದೆ. ಇಂತಹ ಯಾವುದೇ ಅನಧಿಕೃತ ಲಾಟರಿ ಮಾಡಿ, ಮಾರಾಟ ಮಾಡುವುದು ಕಂಡುಬಂದಲ್ಲಿ ಸಾರ್ವಜನಿಕರು ಕೂಡಲೇ ಹತ್ತಿರದ ಪೋಲೀಸ್ ಠಾಣೆಗಳಿಗೆ ಮಾಹಿತಿ ನೀಡಬಹುದು. ಈ ಹಿನ್ನೆಲೆಯಲ್ಲಿ ಅಂತವರ ಮೇಲೆ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ. ಸಾರ್ವಜನಿಕರು ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದಿರಲು ಎಚ್ಚರಿಕೆ ವಹಿಸಬೇಕು. ಮಟ್ಕಾವನ್ನು ಆಡುವುದು ಮತ್ತು ಅಂತರರಾಜ್ಯ ಲಾಟರಿ ಟಿಕೇಟಗಳನ್ನು ಮಾರುವುದು, ಖರೀದಿಸುವುದು, ಮುದ್ರಿಸುವುದು ಸಹ ನಿಷೇಧವಿದ್ದು, ಅಂಥಹವರ ಮೇಲೆ ಸಹ ಕಾನೂನು ಕ್ರಮ ಕೈಗೊಳ್ಳಲು ಪೋಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ. ಜಿಲ್ಲೆಯ ಯಾವತ್ತು ಸಾರ್ವಜನಿಕರು, ಮುದ್ರಕರು, ಮಾರಾಟಗಾರರು, ಖರೀದಿದಾರರು ಈ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ಕೋರಲಾಗಿದೆ.
ಯಾವುದೇ ದಿನಪತ್ರಿಕೆ, ದೃಶ್ಯ ಮಾಧ್ಯಮದವರು ಇಂತಹ “ಅನಧೀಕೃತ ಲಾಟರಿ ಡ್ರಾ” ಫÀಲಿತಾಂಶಗಳನ್ನು ಪ್ರಕಟಿಸದಿರಲು ಕೋರಿದೆ. ಒಂದು ವೇಳೆ ಆ ರೀತಿ ಮಾಡಿದಲ್ಲಿ ಅನಧೀಕೃತ ಲಾಟರಿಗಳಿಗೆ ಸಹಕಾರ ನೀಡಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆವಹಿಸತಕ್ಕದ್ದು ಹಾಗೂ ಇಂಥಹ ಅಕ್ರಮ ಚಟುವಟಿಕೆಗಳು ಕಂಡುಬಂದಲ್ಲಿ ಪೋಲೀಸ್ ಇಲಾಖೆಗೆ ಅಥವಾ ಸಂಬಂಧಿಸಿದವರಿಗೆ ತಕ್ಷಣ ದೂರು ನೀಡಬಹುದೆಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.
Leave a Comment