ಹೊನ್ನಾವರ
ಕೆನರಾ ಸಂಸದ ಅನಂತಕುಮಾರ ಹೆಗಡೆಯವರಿಗೆ ಕೇಂದ್ರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಕ್ಕಿರುವುದಕ್ಕೆ ಬೆಜೆಪಿ ಹೊನ್ನಾವರ ಮಂಡಲದ ಮುಖಂಡರು, ಕಾರ್ಯಕರ್ತರು ಪಟ್ಟಣದ ಶರಾವತಿ ಸರ್ಕಲ್ದಲ್ಲಿ ರವಿವಾರ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಬಿಜೆಪಿ ತಾಲೂಕಾ ಅಧ್ಯಕ್ಷ ಸುಬ್ರಾಯ ನಾಯ್ಕ ಮಾತನಾಡಿ ಅನಂತಕುಮಾರ ಹೆಗಡೆ ಅವರು 5 ಸಲ ಸಂಸದರಾಗಿ ಆಯ್ಕೆಯಾಗಿದ್ದು ಉತ್ತಮ ಸಂಸತ್ಪಟುವಾಗಿ ಅನುಭವ ಹೊಂದಿದ್ದಾರೆ. ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಸಚಿವ ಸ್ಥಾನ ನೀಡಿರುವುದು ಪ್ರಾಮಾಣಿಕತೆಯನ್ನು ಗುರುತಿಸಿ ನೀಡಿದಂತಾಗಿದೆ ಎಂದರು.
ನಂತರ ಪಕ್ಷದ ಕಾರ್ಯಕರ್ತರು, ಮುಖಂಡರು ಅನಂತಕುಮಾರ ಹೆಗಡೆಯವರಿಗೆ ಹಾಗೂ ಪ್ರಧಾನಿ ಮೋದಿಯವರಿಗೆ ಜಯಘೋಷ ಕೂಗಿದರು.
ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ವಿನೋದ ನಾಯ್ಕ ರಾಯಲಕೇರಿ, ಹೊನ್ನಾವರ ಮಂಡಲದ ಪ್ರಧಾ£ Àಕಾರ್ಯದರ್ಶಿ ರಾಜು ಭಂಡಾರಿ, ಗೇರುಸೊಪ್ಪಾ ಮಂಜುನಾಥ ನಾಯ್ಕ ಮುಖಂಡರಾದ ಕವಲಕ್ಕಿ ವೆಂಕಟ್ರಮಣ ಹೆಗಡೆ, ಯುವಮೋರ್ಚಾದ ಅಧ್ಯಕ್ಷ ದೀಪಕ ಶೇಟ್, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಚಿತ್ತಾರ ಗಣಪತಿ ಗೌಡ, ಪ.ಪಂ.ಸದಸ್ಯ ಸುರೇಶ ಶೇಟ್, ರಾಜ್ಯ ಸಮಿತಿ ಸದಸ್ಯ ಉಮೇಶ ನಾಯ್ಕ, ಮಹಿಳಾ ಮೋರ್ಚಾ ಅಧ್ಯಕ್ಷೆ ಜಯಂತಿ ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್. ಎಸ್ ಹೆಗಡೆ. ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಲೋಕೇಶ ನಾಯ್ಕ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಲೋಕೇಶ ಮೇಸ್ತ. ಕೆರಕೋಣದ ಜಿ. ಜಿ. ಭಟ್, ಸಂತೆಗುಳಿ ಎಂ. ಆರ್. ಹೆಗಡೆ, ಹಳದೀಪುರದ ಪರಮೇಶ್ವರ ನಾಯ್ಕ ಮತ್ತಿತರರು ಪಾಲ್ಗೊಂಡಿದ್ದರು.
Leave a Comment