ಹೊನ್ನಾವರ ;
ಫಾರೆಸ್ಟ ಕಾಲೋನಿ ಅಭಿವೃದ್ಧಿ ಸಮಿತಿ ಪ್ರಭಾತನಗರದಲ್ಲಿ ಹಮ್ಮಿಕೊಂಡ ವನಮಹೋತ್ಸವ ಕಾರ್ಯಕ್ರಮ ನಡಯಿತು.
ಕಳೆದ 2 ವರ್ಷಗಳಿಂದ ಉತ್ತಮವಾಗಿ, ವ್ಯವಸ್ಥಿತವಾಗಿ ತನ್ನ ಕಾರ್ಯಚಟುವಟಿಕೆಯನ್ನು ನಡೆಸುತ್ತಾ ಬಂದಿದೆ.
ಕಳೇದ ವರ್ಷ ನೆಟ್ಟ ಗಿಡಗಳೆಲ್ಲ ಬೆಳದು ನಿಂತಿದೆ. ಈ ವರ್ಷ ಅದರ ಮುಂದುವರಿದ ಭಾಗವಾಗಿ ಮಾಜಿ ಶಾಸಕರು,
ಜನಪ್ರಿಯ ನಾಯಕ ದಿನಕರ ಶೆಟ್ಟಿಯವರ ಅಮೃತ ಹಸ್ತದಿಂದ ಗಿಡನೆಡುವುದರ ಮೂಲಕ ಪ್ರಾರಂಭಿಸಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದ ಫಾರೆಸ್ಟ ಕಾಲೋನಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಜಿ. ಜಿ. ಶಂಕರರವರು ಮಾತನಾಡಿ ಕಳೆದ 3 ವರ್ಷಗಳಿಂದ ಫಾರೆಸ್ಟ ಕಾಲೋನಿ ಅಭಿವೃದ್ಧಿ ಸಮಿತಿಯ
ಎನ್ನುವ ನಾಮಾಂಕಿತದೋಂದಿಗೆ ಹಲವಾರು ಯೊಜನೆಗಳನ್ನು ಹಾಗೂ ಕಾರ್ಯಕ್ರಮಗಳನ್ನು ಹಮ್ಮಿಕೋಂಡಿದೆ,
ಅದರಲ್ಲಿ ಅತ್ಯಂತ ಮುಖ್ಯವಾಗಿರುವುದೆನೆಂದರೆ ಹಸಿರನ್ನು ಬೆಳೆಸಿಕೊಂಡು ಮುಂದಿನ ಜಾಯಮಾನಕ್ಕೆ ಉಸಿರನ್ನಾಗಿ ಮಾರ್ಪಡಿಸುವಂತದ್ದು.
ಕಳೇದ ವರ್ಷ ವನಮಹೋತ್ಸವ ಆಚರಣೆ ಮಾಡಿ 5 ಗಿಡಗಳನ್ನು ನೆಡಲಾಯಿತು ಮತ್ತು ಆ 5 ಗಿಡಗಳನ್ನು 5 ಜನರಿಗೆ ದತ್ತಗಿ ನಿಡಲಾಯಿತು
ಹಾಗು ಗಿಡಗಳನ್ನು ಚನ್ನಾಗಿ ಪೊಷಣೆ ಮಾಡಿದ 5 ಜನರಿಗೆ ಕಳೆದ ವರ್ಷ ನಡೆದ ವಾರ್ಷಿಕೋತ್ಸವದಲ್ಲಿ ಪದಕಗಳನ್ನು ನಿಡಲಾಯಿತು.
ತದನಂತರ ಮಾತನಾಡಿದ ಮಾಜಿ ಶಾಸಕ ದಿನಕರ ಶೆಟ್ಟಿಯವರು ಹಸಿರೆ ಉಸಿರು, ತಮ್ಮ ಈ ಉತ್ತಮ ಕಾರ್ಯಕ್ಕೆ ತನ್ನ ಸಕಲ ಬೆಂಬಲವಿದೆಎಂದುರು.
ಈ ಸಂದರ್ಬದಲ್ಲಿ ಜಿ.ವಿ. ನಾಯ್ಕ, ಡಿ.ಡಿ. ಮಡಿವಾಳ, ಮೋಹಿನಿ ಆರ್ ನಾಯ್ಕ, ವಿ. ಆರ್ ಶಾಸ್ತ್ರಿ,
ನವೀನ್ ಮೇಸ್ತ, ಮಾರುತಿ ಸಂಕೊಳ್ಳಿ ಉಪಸ್ಥಿತರಿದ್ದರು. ಬಾಲಚಂದ್ರ ಭಟ್ ಕಾರ್ಯಕ್ರಮ ನಿರುಪಿಸಿದರು, ಆರ್.ಟಿ. ನಾಯ್ಕ ವಂದಿಸಿದರು
Leave a Comment