ಕುಮಟಾತಾಲೂಕಿನ ಮೊರಬಾದ ಶ್ರೀ ಲಕ್ಷ್ಮೀ ನಾರಾಯಣದೇವರಿಗೆಡಾ|| ಬಿ.ಆರ್.ಅಂಬೇಡ್ಕರ್ ಸಂಘ ಹಾಗೂ ಊರ ನಾಗರಿಕರ ಸಹಕಾರದಿಂದಾಗಿ ಶ್ರೀ ದೇವರಿಗೆ ಬೆಳ್ಳಿ ಕವಚ ಹಾಗೂ ಪ್ರಭಾವಳಿ ಸಮರ್ಪಿಸಲಾಯಿತು.ಈ ನಿಮಿತ್ತಯಕ್ಷಗಾನ ಹಾಗೂ ಸನ್ಮಾನಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಆಗಮಿಸಿದ ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್ಅಧ್ಯಕ್ಷರಾದ ನಾಗರಾಜ ನಾಯಕತೊರ್ಕೆಅವರು ಮಾತನಾಡಿ ಬಡತನದಕಷ್ಟದಲ್ಲೂ ಸಂಘಟನೆಯೊಂದನ್ನುಕಟ್ಟಿ ಆ ಮೂಲಕ ಹಣ ಸಂಗ್ರಹಿಸಿ ಇಂತಹಧಾರ್ಮಿಕಕಾರ್ಯಕ್ರಮದೊಂದಿಗೆಚಿಟ್ಟಾಣಿರಾಮಚಂದ್ರ ಹೆಗಡೆಯವರಂತಹ ಮೇರುಯಕ್ಷಗಾನಕಲಾವಿದರನ್ನು ಹಾಗೂ ಹಿರಿಯಯಕ್ಷಗಾನಕಲಾವಿದರಾದ ಬಾಳು ನಾಗು ಹಳ್ಳೇರ ಅವರನ್ನು ಸನ್ಮಾನಿಸಿರುವುದು ಅರ್ಥಪೂರ್ಣ ಹಾಗೂ ಶ್ಲಾಘನೀಯವಾದದ್ದು. ತಾನೂಕೂಡಯಕ್ಷಗಾನ ಪ್ರಿಯರಾಗಿದ್ದುಚಿಟ್ಟಾಣಿರಾಮಚಂದ್ರ ಹೆಗಡೆಅವರಅಭಿಮಾನಿಯಾಗಿದ್ದೇನೆಅವರಿಂದಲೇ ಸ್ಪೂರ್ತಿ ಪಡೆದುತನ್ನ 58 ನೇ ವಯಸ್ಸಿನಲ್ಲಿ ಕೀಚಕನ ಪಾತ್ರ ನಿರ್ವಹಿಸಿದ ಬಗ್ಗೆ ಸಂತಸ ವ್ಯಕ್ತ ಪಡಿಸಿದರು.
ಇನ್ನೋರ್ವಅತಿಥಿಜಿಲ್ಲಾ ಪಂಚಾಯತ್ ಸದಸ್ಯರಾಗಿರುವ ಪ್ರದೀಪ ನಾಯಕದೇವರಬಾವಿ ಅವರು ಮಾತನಾಡಿ ಮೊರಬಾದಂತಹ ಹಿಂದುಳಿದ ಪ್ರದೇಶದಲ್ಲಿಯಕ್ಷಗಾನಕಲೆಯನ್ನುಆರಾಧಿಸುತ್ತಿರುವುದುಅಭಿನಂದನಾರ್ಹವಾಗಿದೆ.ಚಿಟ್ಟಾಣಿರಾಮಚಂದ್ರ ಹೆಗಡೆಅವರನ್ನು ಸನ್ಮಾನಿಸಿದ್ದು ನಮ್ಮೆಲ್ಲರಿಗೂ ಸಂದಗೌರವವಾಗಿದೆಎಂದರು.
ಪದ್ಮಶ್ರೀ ಪುರಸ್ಕ್ರತಚಿಟ್ಟಾಣಿರಾಮಚಂದ್ರ ಹೆಗಡೆ ಹಾಗೂ ಹಿರಿಯಯಕ್ಷಗಾನಕಲಾವಿದ ಬಾಳು ನಾಗು ಹಳ್ಳೇರ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು
ನಂತರ ಸನ್ಮಾನ ಸ್ವೀಕರಿಸಿದ ಚಿಟ್ಟಾಣಿರಾಮಚಂದ್ರ ಹೆಗಡೆಅವರು ಸಂತಸ ವ್ಯಕ್ತ ಪಡಿಸುತ್ತಾತಮ್ಮ ಈ ಸಾಧನೆಗೆಎಲ್ಲಾ ಯಕ್ಷಾಭಿಮಾನಿಗಳು ಕಾರಣತಮ್ಮಜೀವನದುದ್ದಕ್ಕೂ ಯಕ್ಷಾಭಿಮಾನಿಗಳನ್ನು ಮರೆಯಲು ಸಾಧ್ಯವಿಲ್ಲ. ಸಾಧನೆಗೆ ಪ್ರಯತ್ನವೆ ಮೂಲ, ಪ್ರಯತ್ನಕ್ಕೆತಕ್ಕ ಫಲ ಕಟ್ಟಿಟ್ಟ ಬುತ್ತಿಯಾಗಿದೆಎಂದರು.
ಚಿಟ್ಟಾಣಿರಾಮಚಂದ್ರ ಹೆಗಡೆ ಹಾಗೂ ಅವರ ಮೊಮ್ಮಗಕಾರ್ತಿಕಚಿಟ್ಟಾಣಿಅವರಜಾಂಬವತಿಕಲ್ಯಾಣಯಕ್ಷ ಪ್ರಸಂಗ ನೆರೆದಜನರಕಣ್ಮನ ಸೆಳೆದವು.
ಈ ಸಂದರ್ಭದಲ್ಲಿ ಮಹೇಶ ನಾಯಕ, ಬೀರಣ್ಣ ನಾಯಕ, ಸವಿತಾ ಹಳ್ಳೇರ, ರಮಾನಂದ ಪಟಗಾರ, ನಾಗು ಹಳ್ಳೇರ, ಅಣ್ಣಪ್ಪ ಹಳ್ಳೇರ, ವಿಷ್ಣು ಹಳ್ಳೇರ, ರಾಮಾ ಹಳ್ಳೇರ, ಹೊನ್ನಪ್ಪ ಹಳ್ಳೇರ, ಗಣಪತಿ ಹಳ್ಳೇರ, ಸೇರಿದಂತೆ ಹಲವರು ಉಪಸ್ಥಿತರಿದ್ದರು.ಬೊಮ್ಮಯ್ಯಕಲ್ಲು ಹಳ್ಳೇರ ವಂದಿಸಿದರು ಶೀಲಾ ಮೇಸ್ತಾ ನಿರೂಪಿಸಿದರು.
Leave a Comment