ಶ್ರೀ ವೀರಾಂಜನೇಯ ದೇವಸ್ಥಾನ, ಶ್ರೀಕ್ಷೇತ್ರ ಬಂಗಾರಮಕ್ಕಿ, ಗೇರಸೊಪ್ಪಾ ದಲ್ಲಿ ದಿನಾಂಕ 06/09/2017 ರಂದು ಚಾತುರ್ಮಾಸ್ಯದ ಸೀಮೋಲಂಘನಾ ಕಾರ್ಯಕ್ರಮವು ಬಹಳ ಅದ್ಧೂರಿಯಾಗಿ ನಡೆಯಿತು. ಚಾತುರ್ಮಾಸ್ಯದ ಕೊನೆಯ ದಿನವಾದ ಇಂದು ಸೂಕ್ತ ವಿಧಿ-ವಿಧಾನಗಳಿಂದ ಚಾತುರ್ಮಾಸ್ಯದ ಅನುಷ್ಠಾನಕ್ಕೆ ಮಂಗಳ ಹಾಡಲಾಯಿತು. ಚಾತುರ್ಮಾಸ್ಯದ ಸಮಾರೋಪ ಸಮಾರಂಭದ ದಿನದ ಕೊನೆಯ ಘಟ್ಟವಾಗಿ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶ್ರೀ ಮಾರುತಿ ರೆಸಿಡೆನ್ಶಿಯಲ್ ಸ್ಕೂಲ್ ಬಂಗಾರಮಕ್ಕಿ ಯ, ನಿರ್ದೇಶಕರಾದ ಶ್ರೀ ಖೈರನ್… ರವರು ಹಾಗು ಶಾಲೆಯ ಆಡಳಿತ ನಿರ್ದೇಶಕರಾದ ಶ್ರೀ ಜಿ. ಟಿ. ಹೆಗಡೆಯವರು ಅಥಿತಿಗಳಾಗಿ ಆಗಮಿಸಿದ್ದರು, ಶ್ರೀ ಮಾರುತಿ ರೆಸಿಡೆನ್ಶಿಯಲ್ ಸ್ಕೂಲ್ ಬಂಗಾರಮಕ್ಕಿ ಹಾಗೂ ಸಿಲೆಕ್ಟ್ ಫೌಂಡೇಶನ್(ರಿ.) ದತ್ತು ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಕಾರ್ಯಮದಲ್ಲಿ ಭಾಗಿಯಾಗಿ ಗುರೂಜಿಯವರ ಆಶೀರ್ವಚನ ಸ್ವಿಕರಿಸಿದರು.
ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಶ್ರೀ ಖೈರನ್ ರವರು ಪ್ರತಿಯೊಬ್ಬರಿಗೂ ಶುಭ ಹಾರೈಸಿದರು. ಕಾರ್ಯಕ್ರಮದ ಕೊನೆಯಲ್ಲಿ ಶ್ರೀಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿಗಳಾದ ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರು ಮಾತನಾಡಿ, ಚಾತುಮಾಸ್ಯದ ಆಚರಣೆಯಿಂದ ಬಹಳಷ್ಟು ಉಪಯೋಗಗಳು ಇರುವುದು ಎಂದು ಉದಾಹರಣೆಯ ಮೂಲಕ ತಿಳಿಸಿದರು. ವೇದವು ಯಾವ ವ್ಯಕ್ತಿಯಿಂದ ನಿರ್ಮಿತವಾದುದಲ್ಲ, ಭಗವಂತನ ವಾಣಿಯೇ ವೇದವಾಗಿ ಹೊರಹೊಮ್ಮಿದೆ. ಮಾನವನ ಜೀವನವು ಕುದುರೆಯಂತೆ ಮತ್ತು ವೇದವು ಕುದುರೆಯನ್ನು ನಿಯಂತ್ರಿಸುವ ಲಗಾಮಿನಂತೆ, ಲಗಾಮು ಇಲ್ಲದೆ ಕುದುರೆಯನ್ನು ನಿಯಂತ್ರಿಸುವುದು ಹೇಗೆ ಅಸಾಧ್ಯವೋ, ಹಾಗೆಯೇ ಮಾನವನ ಜೀವನವನ್ನು ವೇದವು ನಿಯಂತ್ರಿಸುತ್ತದೆ. ದೇವ ಸಂಪತ್ತಿಗಿಂತ ಜ್ಞಾನ ಸಂಪತ್ತು ದೊಡ್ಡದು ಆ ಜ್ಞಾನ ಸಂಪತ್ತು ನೀಡುವುದು ಗುರು, ಶಿಕ್ಷಕ ಎಂದರೆ ಸಮಾಜದ ಭದ್ರÀತೆ ಹಾಗೂ ಗೌರವ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಆಸ್ತಿ ಎಂದರೆ ಜ್ಞಾನ ಉಳಿದ ಸಂಪತ್ತು ಕ್ಷಣಿಕ ವಿದ್ಯಾರ್ಥಿಗಳು ಜ್ಞಾನ ಸಂಪತ್ತಿನ ಕಣಿಯಾಗಿ ಹೊರ ಹೊಮ್ಮಿದಲ್ಲಿ ದೇಶದ ಏಳ್ಗೆಗೆಗೆ ಸಹಕಾರಿಯಾಗುವುದು ಎಂದು ವಿವರಿಸಿದರು ಹೀಗೆ ಚಾತುರ್ಮಾಸ್ಯದ ಸೀಮೋಲಂಘನಾ ಕಾರ್ಯಕ್ರಮವು ಸಂಪನಗೊಂಡಿತು.
Leave a Comment