ಹೊನ್ನಾವರ; ತಾಲೂಕಿನ ಶ್ರೀ ವೀರಾಂಜನೇಯ ದೇವಸ್ಥಾನ, ಶ್ರೀಕ್ಷೇತ್ರ ಬಂಗಾರಮಕ್ಕಿ ಗೇರಸೊಪ್ಪಾದಲ್ಲಿ, ಚಾತುರ್ಮಾಸ್ಯದ ಸೀಮೋಲಂಘನ ಕಾರ್ಯಕ್ರಮದ ನಿಮಿತ್ತ ಹಮ್ಮಿಕೊಂಡ ‘ಗುರುವಂದನಾ’ ಕಾರ್ಯಕ್ರಮದಲ್ಲಿ ಕ್ಷೇತ್ರದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರು ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಶುಭವಾಗಲಿ ಎಂದು ಹರಸಿದರು.
ಈ ಕಾರ್ಯಕ್ರಮದಲ್ಲಿ ಮಾರುತಿ ರೆಸಿಡೆನ್ಸಿಯಲ್ ಸ್ಕೂಲ್ ಬಂಗಾರಮಕ್ಕಿ ಹಾಗೂ ಸಿಲೆಕ್ಟ ಫೌಂಡೇಶನ್ (ರಿ.) ನ ದತ್ತು ಶಾಲೆಯಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಡಗೇರಿಯ ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ನಂತರ್ಲ ರಾತ್ರಿ ಸ್ಥಳೀಯ ಯಕ್ಷಗಾನ ಕಲಾವಿದರು “ಜಾಂಬವತಿ ಕಲ್ಯಾಣ” ಎಂಬ ಸುಂದರ ಯಕ್ಷಗಾನ ಪ್ರಸಂಗವನ್ನು ಆಡಿ ತೋರಿಸಿದರು. ಅದ್ಭುತ ಸ್ಥಳೀಯ ಕಲಾವಿದರ ತಂಡವು ಆಡಿತೋರಿಸಿದ ಈ ಪ್ರಸಂಗವನ್ನು ನೆರೆದ ಜನರು ವೀಕ್ಷಿಸಿ, ಮನರಂಜನೆಯನ್ನು ಪಡೆಯುವುದರ ಜೊತೆಗೆ ಕಾರ್ಯಕ್ರಮದ ಯಶಸ್ವಿಗೂ ಕಾರಣರಾದರು.
Leave a Comment