2017_2018ನೇ ಸಾಲಿನ ತಾಲೂಕಾ ಮಟ್ಟದ ಪ್ರೌಢವಿಭಾಗದ ಪ್ರತಿಭಾ ಕಾರಂಜಿ ಮತ್ತು ನೃತ್ಯ ಕಲೋತ್ಸವ 11.9.17 ರಂದು ಮಾರ್ಥೋಮಾ ಪ್ರೌಢಶಾಲೆ ಹೊನ್ನಾವರದಲ್ಲಿ ನಡೆದಿದ್ದು ಅದರಲ್ಲಿ ಶ್ರೀ ಚೆನ್ನಕೇಶವ ಪ್ರೌಢಶಾಲೆ ಕರ್ಕಿ ‘ದೇಶದ ಭದ್ರತೆ ಮತ್ತು ಅಂತರರಾಷ್ಟ್ರೀಯ ಸಂಬಂಧ’ ಎಂಬ ಸಂಸ್ಕೃತ ಭಾಷಣದಲ್ಲಿ ಶೃದ್ಧಾ ಹರಿಕಾಂತ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಜಾನಪದ ನೃತ್ಯ ಕಂಸಾಳೆಯಲ್ಲಿ ದ್ವಿತೀಯ ಸ್ಥಾನವನ್ನು ಅಂಕಿತ ಸಂಗಡಿಗರು ಪಡೆದಿದ್ದಾರೆ. ಆಯ್ಕೆಯಾದವರಿಗೆ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಎಲ್. ಎಮ್. ಹೆಗಡೆಯವರು, ಆಡಳಿತ ಮಂಡಳಿಯ ಅಧ್ಯಕ್ಷ ರಾದ ಶ್ರೀ ಕೃಷ್ಣ ಮೂರ್ತಿ ಹೆಬ್ಬಾರ್ ಅವರು, ಆಡಳಿತ ಮಂಡಳಿಯ ಎಲ್ಲ ಸದಸ್ಯರುಗಳು, ಎಲ್ಲಾ ಶಿಕ್ಷಕರುಗಳು ಅಭಿನಂದಿಸಿದ್ದಾರೆ.
Leave a Comment