ಹೊನ್ನಾವರ :
ಪಟ್ಟಣದ ಬೆಂಗಳೂರು ಸರ್ಕಲ್ ಬಳಿ ಇಂದು ಬೆಳಿಗ್ಗೆ ಅನಿಲ ತುಂಬಿದ ಟ್ಯಾಂಕರ್
ಪಲ್ಟಿಯಾಗಿ ಅನಿಲ ಸೋರಿಕೆಯಾಗುತ್ತಿದೆ. ಈ ಭಾಗದ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಬಂದ್ ಮಾಡಲಾಗಿತ್ತು.
ಅನಿಲ ಸೋರಿಕೆಯಾಗುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಘಟನೆ ನಡೆದ ಸ್ಥಳದ ಸುತ್ತಮುತ್ತಲಿನಲ್ಲಿರುವ ಹೋಟೆಲ್ ಮತ್ತಿತರ ಅಂಗಡಿಗಳನ್ನು ಬಂದ್ ಮಾಡಲಾಗಿದೆ.
ಗ್ಯಾಸ್ ಟ್ಯಾಂಕರ್ ಮಂಗಳೂರಿನಿಂದ ಹುಬ್ಬಳ್ಳಿ ಕಡೆಗೆ ಸಾಗುತ್ತಿತ್ತು ಎನ್ನಲಾಗಿದೆ. ಈ ಸರ್ಕಲ್ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪಲ್ಟಿಯಾದ ಟ್ಯಾಂಕರ್ನಲ್ಲಿ ಸಣ್ಣ ಪ್ರಮಾಣದ ರಂಧ್ರವುಂಟಾಗಿರುವುದರಿಂದ ಗ್ಯಾಸ್ ಸೋರಿಕೆಯಾಗುತ್ತಿತ್ತು ಎನ್ನಲಾಗಿದೆ.
ಅನಿಲ ಸೋರಿಕೆಯಾಗಿದ್ದರಿಂದ 5 ಗಂಟೆಗಳ ಕಾಲ ಹೆದ್ದರಿಯಲ್ಲಿ ವಾಹನ ಬಂದ್ ಮಾಡಲಾಯಿತು. ಈ ಸಮಯದಲ್ಲಿ ವಾಹನ ಸವಾರರು ಬದಲಿ ಮಾರ್ಗಗಳನ್ನು ಹುಡುಕಿಕೊಂಡು ಹೋದದ್ದು ಕಂಡುಬಂತು. ಬೆಂಗಳೂರಿನಿಂದ ಬೆಳಗ್ಗಿನ ವೇಳೆಯಲ್ಲಿ ಬರುವ ಹಲವಾರು ಬಸ್ಸುಗಳು ಹೊನ್ನಾವರದ ಪ್ರಭಾತನಗರದವರೆಗೆ ಬಂದು ವಾಪಸ್ ತಿರುಗಿಸಿಕೊಂಡು ಹೋಗಿ ಆರೋಳ್ಳಿ, ಸಂತೇಗುಳಿ ಮಾರ್ಗವಾಗಿ ಸಾಗಿ ಹೆದ್ದಾರಿ ರಾಮತೀರ್ಥ ಕ್ರಾಸ್, ಕರ್ಕಿ, ಹಳದೀಪುರದಲ್ಲಿ ಹೆದ್ದಾರಿಗೆ ಪ್ರವೇಶಿಸಿದವು. ಅಗ್ನಿಶಾಮಕ ದಳದವರು ಗ್ಯಾಸ್ ಸೋರಿಕೆಯನ್ನು ಬಂದ್ ಮಾಡಿದರು. ಅಗ್ನಿಶಾಮಕದಳದವರು ಮತ್ತು ಹೊನ್ನಾವರ ಪೋಲಿಸರು ಸ್ಥಳದಲ್ಲಿ ಠಿಕಾಣಿ ಹೂಡಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.
Leave a Comment