ಹೊನ್ನಾವರ ;
ಭಾತರ ಸರ್ಕಾರ ,ನೆಹರು ಯುವ ಕೇಂದ್ರ ಕಾರವಾರ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ , ಶ್ರೀ ಮಾರಿಕಾಂಬ ಸಾಂಸ್ಕøತಿಕ ಹಾಗೂ ಕ್ರೀಡಾ ಸಂಘ (ರಿ) ಸಾಲಿಕೇರಿ, ಹಳದಿಪುರ, ತಾಲೂಕು ಯುವ ಒಕ್ಕೂಟ ಹೊನ್ನಾವರ, ಸಂಪ್ರಭಾ ಗ್ರಾಮೀಣಾಭಿವೃದ್ದಿ ಸಂಸ್ಥೆ (ರಿ) ಇವರ ಸಂಯುಕ್ತ ಆಶ್ರಯದಲ್ಲಿ “ನೆರೆಹೊರೆ ಯುವ ಸಂಸದ್” ಕಾರ್ಯಕ್ರಮವನ್ನು ಹಳೆ ತಾಲೂಕಾ ಪಂಚಾಯತ ಸಭಾಭವನದಲ್ಲಿ ದಿÀ: 27-09-2017 ರಂದು ಸಮಯ ಬೆಳಿಗ್ಗೆ 10 :30 ಕ್ಕೆ ಇಟ್ಟುಕೊಳ್ಳಲಾಗಿದೆ. ಆ ದಿನ ಯುವಕ ಯುವತಿಯರಿಗೆ ಯುವಕ ಸಂಘದ ಕಾರ್ಯಚಟುವಟಿಕೆಗಳ ಹಾಗೂ ದ್ಯೇಯೋದ್ದೇಶಗಳು ಹಾಗೂ ಸಂಘಗಳಿಗೆ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ಹಾಗೂ ನೆಹರು ಯುವ ಕೇಂದ್ರದ ಸದಸ್ಯತ್ವ ಪಡೆಯುವುದು ,ಇವುಗಳ ಬಗ್ಗೆ ಸಂಪೂರ್ಣ ಮಾಹಿತಿ ಕಾರ್ಯಕ್ರಮ ನಡೆಯುವುದು. ಆ ದಿನ ತಾಲೂಕಿನ ಎಲ್ಲಾ ಯುವಕ ಯುವತಿ ಸಂಘದ ಅಧ್ಯಕ್ಷರು, ಹಾಗೂ ಕಾರ್ಯದರ್ಶಿ ಹಾಜರಿರಬೇಕೆಂದು ತಾಲೂಕು ಯುವ ಒಕ್ಕೂಟದ ಅಧ್ಯಕ್ಷÀ ವಿನಾಯಕ ಬಿ. ನಾಯ್ಕ ಮೂಡ್ಕಣಿ, ಯುವ ಒಕ್ಕೂಟದ ಪ್ರಧಾನ ಕಾರ್ಯದರ್ಶಿÀ ಎಚ್. ಎಲ್. ಗೌಡ ನಗರೆ,ಪ್ರಕಟಣಿ ತಿಳಿಸಿದ್ದಾರೆ.
Leave a Comment