ಹೊನ್ನಾವರ;
“ಶ್ರೇಷ್ಠ ಭಾರತ ” ಕಲ್ಪನೆ ಅಂದರೆ ಅಭಿವೃದ್ಧಿಯೊಂದೇ ಅಲ್ಲ. ಇಲ್ಲಿನ ಹಿಂದೂ ಸಂಪ್ರದಾಯಗಳು, ನಮ್ಮ ಶ್ರೇಷ್ಠ ಪರಂಪರೆ, ಋಷಿಮುನಿಗಳು ನೀಡಿದ ಆಧ್ಯಾತ್ಮ ಚಿಂತನೆಗಳ ಮೂಲಕ ಸುಖ ಸಂಮೃದ್ಧಿಯಿರುವ ನಾಡು ಭಾರತವಾಗಬೇಕು. ಬ್ರಷ್ಟಾಚಾರ, ಬಡತನ ದೂರವಾಗಿ ಎಲ್ಲರೂ ಸನ್ಮಾರ್ಗದಲ್ಲಿ ನಡೆಯುವ ಪ್ರೇರಣೆ ಸಿಗುವಂತಾಗಬೇಕು. ರಾಜಕಾರಣ ಮತ್ತು ರಾಜಕಾರಣಿಗಳು ತತ್ವ ಸಿದ್ಧಾಂತಕ್ಕೆ ಬದ್ಧರಾಗಬೇಕು. ಅದಕ್ಕೆ ನಮ್ಮ ಪಕ್ಷದ ಯುವ ನಾಯಕರು ಚುನಾವಣೆನಲ್ಲಿ ಆಯ್ಕೆಯಾಗುವುದಾದರೆ ಭಾರತೀಯ ಪುರಾತನ ತತ್ವಾದರ್ಶಗಳ ಆಧಾರದಲ್ಲಯೇ ಆಯ್ಕೆಯಾಗುತ್ತೇನೆ ಎಂದು ಶಪತ ಮಾಡಬೇಕು. ಎಂದು ಹಿರಿಯ ಮುತ್ಸದ್ಧಿ ಡಾ| ಟಿ.ಟಿ. ಹೆಗಡೆ ಹೇಳಿದರು.
ಅವರು ಶ್ರೀ ಚೆನ್ನಕೇಶವ ಸಭಾಭವನ ಕರ್ಕಿಯಲ್ಲಿ ಉದ್ಟಾಟಿಸಿ ಮಾತನಾಡಿದರು. ಎಲ್ಲರೂ ದುಡ್ಡುಮಾಡಲಿಕ್ಕೆ ರಾಜಕೀಯಕ್ಕೆ ಬಂದರೆ ಶ್ರೇಷ್ಠಭಾರತ ಕಲ್ಪನೆ ಪೂರ್ಣಗೊಳ್ಳುವುದಾದರೂ ಹೇಗೆ ಎಂದು ಪ್ರಶ್ನಿಸಿದರು. ಬಿಜೆಪಿಯಲ್ಲೂ ಬದಲಾವಣೆಯ ಗಾಳಿ ಬೀಸುತ್ತಿದೆ ತಮ್ಮ ಸ್ವಾರ್ಥ ಸಾಧನೆ ಆಗದೇಹೋದರೆ ಪಕ್ಷ ಬಿಟ್ಟು ಹೋಗುತ್ತಾರೆ. ಆದರೆ ತತ್ವಸಿದ್ದಾಂತದಡಿಯಲ್ಲಿ ಕಾರ್ಯವೆಸುಗುವ ಕಾರ್ಯಕರ್ತ ಪಕ್ಷಕ್ಕಾಗಿಯೇ ಸದಾಕಾಲ ಚಿಂತಿಸುತ್ತಾನೆ. ಜನಸಂಘದ ಕಾಲದಿಂದಲೂ ಪಕ್ಷದೊಂದಿಗೆ ಗುರುತಿಸಿಕೊಂಡು ಈಗಲೂ ಪಕ್ಷಕ್ಕಾಗಿ ದುಡಿಯುವ ಅನೇಕರು ನಮ್ಮೊಂದಿಗಿದ್ದಾರೆ. ಒಳ್ಳೆಯವರಿಗೆ ಪಕ್ಷ ಟಿಕೇಟ್ ನೀಡಿದರೆ ಒಳ್ಳೆಯವರು ಆಯ್ಕೆಯಾಗುತ್ತಾರೆ. ದೇಶಕ್ಕೆ ಜನತೆಗೆ ಒಳ್ಳೆಯದು ಆಗುತ್ತದೆ ಪ್ರೀತಿಯಿಂದ ಹಿರಿಯರ ಜೊತೆ ಒಂದು ಕಪ್ ಚಹ ಕುಡಿಯುವುದು ನನಗೆ ತುಂಬಾ ಹಿಡಿಸಿತು ಅದಕ್ಕಾಗಿ ನಾನು ಬಂದಿದ್ದೇನೆ ಎಂದರು.
ಮಾಜಿ ಶಾಸಕರೂ, ಬಿಜೆಪಿಯ ಹಿರಿಯ ಧುರೀಣ ಡಾ| ಎಂ.ಪಿ.ಕರ್ಕಿ ಮಾತನಾಡಿ ಜನಸಂಘದ ಕಾಲದಿಂದ ಪಕ್ಷ ಎದುರಿಸಿದ ಸವಾಲುಗಳನ್ನೂ ತೆರೆದಿಟ್ಟರು ಚುನಾವಣೆಗೆ ನಿಲ್ಲುವವರೇ ಇಲ್ಲದಿದ್ದಾಗ ಸೋಲು ಗೊತ್ತಿದ್ದರೂ ಪಕ್ಷದ ಸಂಘಟನೆಗಾಗಿ ಸ್ಪರ್ಧಿಸುತ್ತಿದ್ದೇವು. ಆವಾಗಲೂ ಪೈಸೆ ಅಪೇಕ್ಷೆ ಪಡದೆ ಚುನಾವಣೆಗೆ ಕೆಲಸ ಮಾಡಿದ ಹಿರಿಕಿರಿಯ ಕಾರ್ಯಕರ್ತರ ನೆನಪು ಬರುತ್ತಿದೆ. ಕಾರ್ಯಕರ್ತರನ್ನು ಗೌರವಿಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಣಯ ತೆಗೆದುಕೊಳ್ಳಬೇಕು. ಜನಸಂಘದ ಕಾಲದಿಂದಲೂ ಪಕ್ಷ ಇದನ್ನೆ ಪಾಲಿಸಿಕೊಂಡು ಬಂದಿದೆ ಸ್ಥಳೀಯ ಕಾರ್ಯಕರ್ತರ ಭಾವನೆಗಳಿಗೆ ಬೆಲೆ ಸಿಗುವಂತಾಗಬೇಕು. ಹಿರಿಯರನ್ನು ಗೌರವಿಸುವ ಪರಂಪರೆ ನಮ್ಮದು ಚುನಾವಣೆಯಲ್ಲಿ ಎಲ್ಲರೂ ಒಂದಾಗಿ ಕೆಲಸಮಾಡವೇಕು ಎಂದರು.
ಅಧ್ಯಕ್ಷತೆ ವಹಿಸಿ ಕೇಶವನಾಯ್ಕ ಬಳ್ಕೂರು ಮಾತನಾಡಿ ಹಿರಿಯರ ಆಶೀರ್ವಾದ ಮತ್ತು ಪಕ್ಷದ ತತ್ವಾದರ್ಶಗಳನ್ನು ಅರಿತು ಪಕ್ಷ ಸಂಘಟನೆ ಮಾಡಿದರೆ ಪಕ್ಷ ಬಲಗೊಳ್ಳುತ್ತದೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಈ ರೀತಿ ಹಿರಿಯರ ಜೊತೆ ಮುಕ್ತವಾಗಿ ಮಾತನಾಡಿ ಅವರ ಮಾರ್ಗದರ್ಶನ ಪಡೆದು ಪಕ್ಷ ಬಲಗೊಳ್ಳುವಂತೆ ಮಾಡಬೇಕು ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು. ಹಿರಿಯರ ಜೊತೆ ಈ ವೇದಿಕೆ ಹಂಚಿಕೊಂಡಿದ್ದು ನನ್ನ ಭಾಗ್ಯ ಎಂದರು.
ಪ್ರಾಸ್ತಾವಿಕವಾಗಿ ಎಂ.ಜಿ.ಭಟ್ಟ ವಂದೂರು ಮಾತನಾಡುತ್ತ ಸಭೆ ಕರೆದಿರುವ ಅಂಶವನ್ನು ಹಿರಿಯ ಕಾರ್ಯಕರ್ತರಿಗೆ ಮನಗಾಣಿಸಿದರು.
ಸಹಕಾರಿ ಧುರೀಣ ವಿ.ಎಸ್.ಭಟ್ಟ ಅಳ್ಳಂಕಿ, ಸೂರಜ ನಾಯ್ಕ ಸೋನಿ, ಮೋಹನ ನಾಯಕ, ಸದಾನಂದ ಭಟ್ಟ ಮುಂತಾದವರು ಮಾತನಾಡಿದರು.
ವೇದಿಕೆಯಲ್ಲಿ ಹಿರಿಯ ಬಿಜೆಪಿ ನಾಯಕ ಉಮೇಶ ನಾಯ್ಕ, ಸುಬ್ರಾಯ ಗೌಡ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೂರಾರು ಸಂಖ್ಯೆಯಲ್ಲಿ ಸೇರಿದ ಬಿಜೆಪಿಯ ಹಿರಿಯ ಕಾರ್ಯಕರ್ತರು ಮನೆಯ ಕಾರ್ಯಕ್ರಮದಂತೆ ಸಂಭ್ರಮಿಸಿದರು. ಎಮ್.ಜಿ. ಆಚಾರಿ ಕಾರ್ಯಕ್ರಮ ಸ್ವಾಗತಿಸಿ ವಂದಿಸಿದರು.
Leave a Comment