ಹಳಿಯಾಳ:-
ವಿವಿಧ ಹಿಂದೂ ಸಂಘಟನೆಗಳು ಹಾಗೂ ಶಿವಪ್ರತಿಷ್ಠಾನ ನೇತೃತ್ವದಲ್ಲಿ ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣದಲ್ಲಿ ದಸರಾ ಹಬ್ಬ, ನವರಾತ್ರಿ ಉತ್ಸವದ ಅಂಗವಾಗಿ ನಡೆಯುತ್ತಿರುವ “ದುರ್ಗಾದೌಡ” ಧಾರ್ಮಿಕ ನಡಿಗೆ ಕಾರ್ಯಕ್ರಮ ದಿ.29 ರಂದು ಮುಕ್ತಾಯಗೊಳ್ಳಲಿದ್ದು ಪ್ರತಿನಿತ್ಯ ಬೆಳಗಿನ ಜಾವ ನಡೆಯುವ ಈ ಧಾರ್ಮಿಕ ನಡಿಗೆ ಕಾರ್ಯಕ್ರಮದಲ್ಲಿ 8 ಸಾವಿರಕ್ಕೂ ಅಧಿಕ ಶ್ರದ್ದಾಳುಗಳು ಭಾಗವಹಿಸುತ್ತಿದ್ದು ದಿ.29 ರಂದು ತುಳಜಾಭವಾನಿ ದೇವಸ್ಥಾನದಿಂದ ಹೊರಟು ಶೆಟ್ಟಿಗಲ್ಲಿ, ಬಸವನಗಲ್ಲಿ, ಕಿಲ್ಲಾ ಪ್ರದೇಶದಿಂದ ದೇಸಾಯಿಗಲ್ಲಿ ಮೂಲಕ ಇಲ್ಲಿಯ ಗ್ರಾಮದೇವಿ ಉಡಚಮ್ಮಾ ದೇವಸ್ಥಾನಕ್ಕೆ ಆಗಮಿಸಿ ದುರ್ಗಾದೌಡ ಬೃಹತ್ ಸಮಾವೇಶದ ಮೂಲಕ ಸಂಪನ್ನಗೊಳ್ಳಲಿದ್ದು ಸಮಾವೇಶದಲ್ಲಿ ಕಾಶೀಯ ಗಾನಯೋಗಿ ಮಂಜುನಾಥ ಮಹಾರಾಜ, ರಾಜ್ಯದ ಏಕೈಕ ಶನಿಧಾಮ ಕರ್ಲಕಟ್ಟಾದ ಮೇಘನಾಥ ಮಹಾರಾಜ ಹಾಗೂ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ಭಾಗವಹಿಸಿ ಮಾತನಾಡಲಿದ್ದಾರೆಂದು ಸಂಘಟಕರು ತಿಳಿಸಿದ್ದಾರೆ.
Leave a Comment