ಕಾರವಾರ:
ಕನ್ನಡಿಗರೂ ಹಿಂದಿನಿಂದಲೂ ವೈವಿದ್ಯಮಯ ಸಂಸ್ಕøತಿ ಸಹಬಾಳ್ವೆಯನ್ನು ರೂಡಿಸಿಕೊಂಡಿದ್ದು, ಈಚೆಗೆ ಹೆಚ್ಚುತ್ತಿರುವ ಧಾರ್ಮಿಕ ಹಾಗೂ ಆರ್ಥಿಕ ಮೂಲಭೂತಗಳಿಂದ ಕನ್ನಡ ಮನ್ನಸುಗಳು ಪಾಯದಲ್ಲಿದೆ ಎಂದು ಚಿಂತಕ ಡಾ.ರಾಜೇಂದ್ರ ಚಿನ್ನಿ ಹೇಳಿದರು.
ವಿವಿಧ ಪ್ರಗತಿಪರ ಸಂಘಟನೆಗಳಿಂದ ಹಮ್ಮಿಕೊಂಡ ನಾನು ಗೌರಿ ಸಮಾನ ಮನಸುಗಳ ಸಮಾವೇಶ -2017 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಹುಮುಖತ್ವದ ಕನ್ನಡದ ಮನಸ್ಸು ಹಿಂದಿನಿಂದಲೂ ವೈವಿಧ್ಯಮಯ ಸಂಸ್ಕøತಿ, ಭಾಷೆಯೊಂದಿಗೆ ಸಹಬಾಳ್ವೆ, ಸೌಹಾರ್ದತೆ, ವಿವೇಕಯುತ ವೈಚಾರಿಕತೆಗೆ ಹೆಚ್ಚಿನ ಮಹತ್ವ ನೀಡಿವೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಧಾರ್ಮಿಕ, ಆರ್ಥಿಕ ಮೂಲಭೂತವಾದದಿಂದ ಕನ್ನಡ ಮನಸ್ಸು ತೊಂದರೆ ಅನುಭವಿಸುತ್ತಿದೆ ಎಂದರು. ಸಮಾಜ ಇಂದು ಕರಾಳ ಸನ್ನಿವೇಶವನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಸಮುದಾಯದ ಮನಸ್ಸುಗಳು ಒಂದಾಗಿ ವಿವೇಕ ಮೆರೆಯಬೇಕಾಗಿದೆ. ವೈಚಾರಿಕತೆಗೆ ಧಕ್ಕೆಯಾದಾಗ ನಾವೆಲ್ಲಾ ಒಂದು ಎಂಬುದನ್ನು ತೋಪರ್ಡಿಸಬೇಕಾಗಿದೆ. ದಿಟ್ಟ ಪತ್ರಕರ್ತೆ, ಮಾನವ ಹಕ್ಕುಗಳ ಹೋರಾಟಗಾರ್ತಿ ಗೌರಿ ಹತ್ಯೆ ಬಳಿಕ ಸಮಾನ ಮನಸ್ಸುಗಳು ಒಂದಾಗಬೇಕಿದೆ. ಹತ್ಯೆಕೋರರನ್ನು ಹಾಗೂ ಅದರ ಹಿಂದಿರುವ ಸಂಸ್ಥೆಗಳನ್ನು ಹಿಡಿದು ಶಿಕ್ಷಿಸಬೇಕು ಎಂದು ಆಗ್ರಹಿಸಿದರು.
ಸಾಮಾಜಿಕ ಚಿಂತಕ ಎಂ.ಜಿ.ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಶಾಂತಿ ನಾಯಕ, ಜಾರ್ಜ್ ಫರ್ನಾಂಡೀಸ್, ಗಂಗಾಧರ ಹೀರೇಗುತ್ತಿ, ಅಲ್ತಾಫ್ ಶೇಖ್, ವಿಠ್ಠಲ್ ಭಂಡಾರಿ ವೇದಿಕೆಯಲ್ಲಿದ್ದರು.
Leave a Comment