ಹಳಿಯಾಳ: ಜಗತ್ತಿನಲ್ಲಿರುವ 50 ಮಿಲಿಯನ್ ಕುರುಡು ವ್ಯಕ್ತಿಗಳಲ್ಲಿ ಶೇ. 90% ರಷ್ಟು ಭಾರತದಲ್ಲಿದ್ದಾರೆ. ಇದರಲ್ಲಿ ಶೇ. 80% ರಷ್ಟು ಕುರುಡತನವನ್ನು ಚಿಕಿತ್ಸೆಯಿಂದ ನೇತ್ರದಾನದಿಂದ ತಡೆಗಟ್ಟಬಹುದು ಎಂದು ಹಳಿಯಾಳ ಆರೋಗ್ಯ ಇಲಾಖೆಯ ಅಧಿಕಾರಿ ಪ್ರಕಾಶ ಮಾನೆ ಹೇಳಿದರು.
18 ನೇ ವಿಶ್ವ ದೃಷ್ಟಿ ದಿನಾಚರಣೆಯ ಪ್ರಯುಕ್ತ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ಎನ್.ಎಸ್.ಎಸ್. ಘಟಕವು ಹಮ್ಮಿಕೊಂಡ ಕಣ್ಣಿನ ಆರೈಕೆ ಮತ್ತು ನೇತ್ರದಾನದ ಬಗ್ಗೆ ನಡೆದ ಮಾಹಿತಿ ಕಾರ್ಯಗಾರವನ್ನು ಉಧ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲ ಡಿ.ಆರ್. ನಾಯ್ಕ “ನೇತ್ರದಾನದ ಬಗ್ಗೆ ಹಾಗೂ ಕಣ್ಣಿನ ಆರೈಕೆ ಬಗ್ಗೆ ಮಾಹಿತಿ ನೀಡಿದರು.
ಎನ್.ಎಸ್.ಎಸ್. ಅಧಿಕಾರಿ ದಿನೇಶ ಡಿ. ನಾಯ್ಕ ಅಧಿಕಾರಿಗಳು ಇದ್ದರು. ವಿದ್ಯಾರ್ಥಿಗಳಾದ ಜಂಗಲಿಸಾಬ, ಗುರುಕಿರಣ ಹೆಗೆಡೆ ನಿರೂಪಿಸಿದರು. ಎನ್.ಎಸ್.ಎಸ್. ಸಹ ಅಧಿಕಾರಿ ಅವಿನಾಶ ಲೋನಿ ವಂದಿಸಿದರು.
Leave a Comment