ಹೊನ್ನಾವರ :
ರೋಟೇರಿಯನ್ ವಿಷ್ಣು ಬಾಳೇರಿ ಸ್ಮರಣಾರ್ಥ 2ನೇ ವರ್ಷದ ರಾಜ್ಯಮಟ್ಟದ ಚೆಸ್ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮ ಇಂದು ಎಸ್.ಡಿ.ಎಂ. ಕಾಲೆಜಿನ ಎ.ವಿ. ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಎಂ.ಪಿ.ಇ. ಸೊಸೈಟಿಯ ಅಧ್ಯಕ್ಷರಾದ ಎಂ.ಪಿ. ಕರ್ಕಿ ಅವರು ಉದ್ಘಾಟಿಸಿ ಎಲ್ಲಾ ಸ್ಪರ್ಧಾಳುಗಳಿಗೆ ಶುಭ ಹಾರೈಸಿದರು.
ಮುಖ್ಯ ಅಥಿತಿಗಳಾದ ರಾಘವ ಬಾಳೇರಿ ಮಾತನಾಡಿ ಈ ಕಾರ್ಯಕ್ರಮದಲ್ಲಿ ಜಿಲ್ಲಾ ಚೆಸ್ ಅಸೋಸಿಶಿಯೇಶನ್ನ ಅಧ್ಯಕ್ಷರಾದ ವಿ. ರೋಟರಿ ಸಂಸ್ಥೆ ಕಳೆದ ಹಲವಾರು ವರ್ಷಗಳಿಂದ ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಡು ಬರುತ್ತಿದ್ದು ಇಂದು 2ನೇ ವರ್ಷದ ರಾಜ್ಯ ಮಟ್ಟದ ಚೆಸ್ ಸ್ಪರ್ಧೆ ಆಯೋಜಿಸಿದೆ. ಈ ಸ್ಪರ್ದೆಯಲ್ಲಿ ರಾಜ್ಯದ ಹಲವಾರು ಕಡೆಗಳಿಂದ ಕ್ರೀಡಾಪಟಗಳು ಬಂದಿದ್ದು ನಮ್ಮ ಹೊನ್ನಾವರವನ್ನು ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಈ ಸಂಸ್ಥೆ ಮಾಡಿದೆ. ಮುಂದಿನ ದಿನಗಳಲ್ಲಿ ಇದು ಚೆಸ್ ಸ್ಪರ್ಧೆಗೆ ಮಾತ್ರ ಮೀಸಲಾಗದೆ ಇನ್ನೂ ಬೇರೆ ಬೇರೆ ಸ್ಪರ್ಧೆ ಆಯೋಜಿಸುವಂತಾಗಬೇಕು ಎಂದುರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಚೆಸ್ ಅಸೋಸಿಶಿಯೇಶನ್ನ ಅಧ್ಯಕ್ಷರಾದ ವಿ.ಕೆ. ಕಾಮತ್, ರೊಟರಿ ಅಧ್ಯಕ್ಷರಾದ ಎಎಸ್.ಶಾಸ್ತ್ರಿ, ಕಾರ್ಯದರ್ಶಿ ಸ್ಟಿಪೆನ್ ರೋಡ್ರಗೀಸ್, ಸೂರ್ಯಕಾಂತ ಸಾರಂಗ ಉಪಸ್ಥಿತರಿದ್ದರು.
Leave a Comment