ಕಾರವಾರ: ಅಂಜುದೀವ್ ದ್ವೀಪದ ಬಳಿ ಮಲ್ಪೆ ಹಾಗೂ ಮಂಗಳೂರು ಮೂಲದ ಬೋಟ್ಗಳು ಅನಧಿಕೃತವಾಗಿ ಬುಲ್ಟ್ರಾಲ್ ಮೀನುಗಾರಿಕೆ ನಡೆಸುತ್ತಿವೆ. ಮಲ್ಪೆ ಹಾಗೂ ಮಂಗಳೂರು ಭಾಗದ ಮೀನುಗಾರರು ಕಾನೂನು ಬಾಹಿರವಾಗಿ ಮೀನುಗಾರಿಕೆ ನಡೆಸಿದರೂ ಕೋಸ್ಟ ಗಾರ್ಡ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಬದಲಾಗಿ ಸ್ಥಳೀಯ ಮೀನುಗಾರರ ಮೇಲೆ ಅನಾವಷ್ಯಕವಾಗಿ ವಿವಿಧ ಪ್ರಕರಣಗಳನ್ನು ದಾಖಲಿಸಿ ತೊಂದರೆ ನೀಡುತ್ತಿದ್ದಾರೆ.
ಭಾರತೀಯ ನೌಕಾನೆಲೆ ವ್ಯಾಪ್ತಿಗೆ ಬರುವ ಅಂಜುದೀವ್ ದ್ವೀಪದ ಬಳಿ ಇತರರಿಗೆ ಪ್ರವೇಶ ನಿಷೇಧಿಸಲಾಗಿದೆ. ಸ್ಥಳೀಯ ಮೀನುಗಾರರು ಆ ವ್ಯಾಪ್ತಿಯಲ್ಲಿ ಮೀನುಗಾರಿಕೆ ನಡೆಸಿದರೆ ಮೀನುಗಾರಿಕಾ ಬೋಟ್ಗಳನ್ನು ವಶಕ್ಕೆ ಪಡೆದು, ಮೀನುಗಾರರನ್ನು ಬಂಧಿಸಲಾಗುತ್ತದೆ. ಆದರೆ, ಪ್ರಭಾವಿಗಳಾದ ಮಂಗಳೂರು ಹಾಗೂ ಮಲ್ಪೆ ಮೀನುಗಾರರು ಅಂಜುದೀವ್ ದ್ವೀಪದ ಬಳಿ ರಾಜಾರೋಷವಾಗಿ ಬುಲ್ಟ್ರಾಲ್ ಮೀನುಗಾರಿಕೆ ನಡೆಸುತ್ತಿದ್ದಾರೆ. ತಟರಕ್ಷಕ ಪಡೆಯವರ ಬೋಟ್ ಪಕ್ಕದಲ್ಲಿಯೇ ಸಾಲು ಸಾಲು ಬೋಟ್ಗಳನ್ನು ನಿಲ್ಲಿಸಿ ಅನಧಿಕೃತ ಹಾಗೂ ನಿಷೇಧಿತ ಬುಲ್ಟ್ರಾಲ್ ಮೀನುಗಾರಿಕೆ ನಡೆಸುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಎರಡು ಅಥವಾ ಅದಕ್ಕಿಂತ ಹೆಚ್ಚಿನ ಯಾಂತ್ರಿಕೃತ ಬೋಟ್ಗಳು ಒಟ್ಟಿಗೆ ಬಲೆ ಎಳೆದು ಮೀನುಗಾರಿಕೆ ನಡೆಸುವದನ್ನು ಬುಲ್ಟ್ರಾಲ್ ಎಂದು ಕರೆಯಾಗುತ್ತದೆ. ಬುಲ್ಟ್ರಾಲ್ ಮೀನುಗಾರಿಕೆಯಿಂದ ಮತ್ಸ್ಯ ಸಂತತಿ ನಾಶವಾಗುವದನ್ನು ಮನಗಂಡು ಇದನ್ನು ಎಲ್ಲಡೆ ನಿಷೇಧಿಸಲಾಗಿದೆ. ಹೀಗಿದ್ದರೂ ಮಲ್ಪೆ ಹಾಗೂ ಮಂಗಳೂರು ಭಾಗದ ಮೀನುಗಾರರ ಈ ನಿಯಮವನ್ನು ಪಾಲಿಸುತ್ತಿಲ್ಲ ಎಂಬುದು ಸ್ಥಳೀಯ ಮೀನುಗಾರರ ಆರೋಪವಾಗಿದೆ.
350ಎಚ್.ಪಿ ಹಾಗೂ ಅದಕ್ಕಿಂತ ಹೆಚ್ಚಿನ ಇಂಜಿನ್ ಸಾಮಥ್ರ್ಯದ ಬೋಟ್ಗಳು ಸಮುದ್ರ ತಟದಿಂದ 12ನಾಟಿಕಲ್ ಮೈಲು ದೂರದ ಒಳಗೆ ಮೀನುಗಾರಿಕೆ ನಡೆಸುವಂತಿಲ್ಲ. ಆಳ ಸಮುದ್ರದಲ್ಲಿ ಇವು ವೈಜ್ಞಾನಿಕವಾಗಿ ಮೀನುಗಾರಿಕೆ ನಡೆಸಬಹುದಾಗಿದೆ. ಆದರೆ, ಉತ್ತರ ಕನ್ನಡ ಜಿಲ್ಲೆ ಹೊರತು ಪಡಿಸಿ ಉಳಿದ ಭಾಗದಿಂದ ಬಂದ ಬೋಟ್ಗಳು 6 ನಾಟಿಕಲ್ ಮೈಲಿನ ವ್ಯಾಪ್ತಿಯೊಳಗೆ ಅನಧಿಕೃತ ಮೀನುಗಾರಿಕೆ ನಡೆಸುತ್ತಿದ್ದಾರೆ. ಇದರಿಂದ ಮತ್ಸ್ಯ ಸಂತತಿ ಕ್ಷೀಣಿಸಿ ಸಮುದ್ರ ಬರಡಾಗುವ ಸಾಧ್ಯತೆಗಳಿವೆ. ಹೀಗಾಗಿ ಮೀನುಗಾರಿಕೆಯನ್ನೇ ನಂಬಿರುವ ಸ್ಥಳೀಯ ಮೀನುಗಾರರು ಆತಂಕಕ್ಕಿಡಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಮೀನುಗಾರರು ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದರೂ ಅವರನ್ನು ಪರಿಕ್ಷಿಸುವ ಕರಾವಳಿ ಕಾವಲು ಪಡೆ ಅಧಿಕಾರಿಗಳು ವಿವಿಧ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ಲೈಪ್ ಜಾಕೇಟ್ ದರಿಸಿಲ್ಲ, ದಾಖಲೆ ಸರಿಯಿಲ್ಲ ಎಂಬ ಕಾರಣಗಳನ್ನು ನೀಡಿ ಆಳ ಸಮುದ್ರದಲ್ಲಿ ಮತ್ಸ್ಯಭೇಟೆ ನಡೆಸುತ್ತಿರುವ ಮೀನುಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ. ಇದರಿಂದ ಮೀನುಗಾರ ದುಡಿಮೆ ಹಾಗೂ ಬೋಟ್ಗೆ ತುಂಬಿದ ಇಂದನವೂ ವ್ಯರ್ಥವಾಗುತ್ತಿದೆ ಎಂದು ಬೈತಖೋಲ್ದ ದರ್ಶನ್ ರಾಜೇಶ್ ಮಾಜಾಳಿಕರ್ ಅಳಲು ತೋಡಿಕೊಂಡರು.
Leave a Comment